ದಾವಣಗೆರೆ: ಉಡುಪಿ ಪೇಜಾವರ ಮಠ (Udupi Pejavara Mutt)ದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ದಲಿತರ ಮನೆಮನೆಗಳಿಗೆ ಭೇಟಿ ನೀಡಿ ನಾವೆಲ್ಲೂ ಒಂದೇ ಜಾತಿ ಭೇದ ಭಾವ ಇಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದರು. ಇವರ ನಿಧನದ ನಂತರ ಇದೀಗ ಇಂತದ್ದೇ ಕಾರ್ಯವನ್ನು ಮುಂದುವರಿಸಿದ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಅವರು ಪಾದ ಪೂಜೆ ಹಿನ್ನೆಲೆ ದಲಿತ ಮುಖಂಡನ ಮನೆಗೆ ಹೋಗಿದ್ದಾರೆ. ದಾವಣಗೆರೆ ನಗರದ ಜಯ ನಗರದಲ್ಲಿ ಇರುವ ಬಿಜೆಪಿ ಮುಖಂಡ ಆಲೂರು ಲಿಂಗರಾಜ್ ಅವರ ಮನೆಗೆ ಶ್ರೀಗಳು ಭೇಟಿ ನೀಡಿ ಪಾದ ಪೂಜೆ ಮಾಡಿಸಿಕೊಂಡರು.
ಈ ವೇಳೆ ಮಾತನಾಡಿದ ಶ್ರೀಗಳು, ರಾಮಮಂದಿರ ಆಯಿತು, ಇನ್ನೂ ರಾಮರಾಜ್ಯ ಆಗಬೇಕಿದೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತುರ್ತಾಗಿ ನಡೆದಿದೆ. ಬರುವ 2024 ಜನವರಿಯ ಮಕರ ಸಂಕ್ರಾಂತಿ ವೇಳೆ ನಿರ್ಮಾಣ ಪೂರ್ಣವಾಗಲಿದೆ. ರಾಮಮಂದಿರ ಮುಕ್ತಾಯದ ನಂತರ ಮುಂದೇನು ಎಂಬ ಚಿಂತನೆ ನಡೆದಿದೆ. ದೇಶವನ್ನು ರಾಮರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ದಲಿತರ ಮನೆಗಳಿಗೆ ಹೋಗುವುದು ಹಿರಿಯ ಗುರುಗಳ ಚಿಂತನೆಯಾಗಿದೆ. ಸಮಾಜದಲ್ಲಿ ಸಮಾನತೆ ಸಹೋದರತೆ ಹಾಗೂ ಪರಸ್ಪರ ಪ್ರೀತಿಯಿಂದ ಬದುಕುವಂತಾಗಬೇಕು. ಎಲ್ಲ ವರ್ಗದವರ ಮನೆಗೆ ಹೋಗುವುದು ಹಿರಿಯ ಗುರುಗಳ ಗುಣ. ಅದನ್ನ ನಾವೂ ಕೂಡಾ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ