Home Uncategorized ಬಿಬಿಎಂಪಿ ಸಿಬ್ಬಂದಿಯಿಂದ ಬೆದರಿಕೆ: ಆರ್‌ಟಿಐ ಕಾರ್ಯಕರ್ತ ಆರೋಪ

ಬಿಬಿಎಂಪಿ ಸಿಬ್ಬಂದಿಯಿಂದ ಬೆದರಿಕೆ: ಆರ್‌ಟಿಐ ಕಾರ್ಯಕರ್ತ ಆರೋಪ

35
0

ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ವಸಂತಪುರ ಗ್ರಾಮದ ಕಂದಾಯ ನಿರೀಕ್ಷಕ ವೆಂಕಟೇಶ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ವಿರುದ್ಧ ಆರ್‌ಟಿಐ ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು: ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ವಸಂತಪುರ ಗ್ರಾಮದ ಕಂದಾಯ ನಿರೀಕ್ಷಕ ವೆಂಕಟೇಶ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ವಿರುದ್ಧ ಆರ್‌ಟಿಐ ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ವೀರೇಶ್ ಬಿ.ಎಚ್, ನಾಗೇಶ್ವರಬಾಬು ಉತ್ತರಹಳ್ಳಿಯ ಸಹಾಯಕ ಕಂದಾಯ ಕಚೇರಿಯಲ್ಲಿ ಮೇ 2ರಂದು 5.22 ಎಕರೆ ಅನುಮೋದಿತ ಬಡಾವಣೆಯ ದೃಢೀಕೃತ ಪ್ರತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಾಹಿತಿ ನೀಡುವ ಬದಲು ಬಿಬಿಎಂಪಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಸಂತಪುರ ಗ್ರಾಮದ ಸರ್ವೆ ನಂಬರ್ 15/2 ಮತ್ತು 15/3ರ ಲೇಔಟ್ ಅಕ್ರಮವಾಗಿದ್ದು, ಬಿಬಿಎಂಪಿಗೆ ಹೊರೆಯಾಗಿದೆ. ಇದನ್ನು ಸಾಬೀತು ಪಡಿಸಲು ಕಾರ್ಯಕರ್ತ ನಾಗೇಶ್ವರ ರಾವ್ ಎಂಬುವರು ಅರ್ಜಿ ಸಲ್ಲಿಸಿದ್ದು, ಕಂದಾಯ ನಿರೀಕ್ಷಕ ವೆಂಕಟೇಶ್ ಕರೆ ಮಾಡಿ ಅರ್ಜಿ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಂಗಾರು ಆರಂಭದಲ್ಲೇ ಡಿಸಿಎಂ ಶಿವಕುಮಾರ್ ಬೆಂಗಳೂರು ರೌಂಡ್ಸ್: ರಾಜಕಾಲುವೆ, ಚರಂಡಿ, ಕೆರೆ ಪರಿಶೀಲನೆ, ಅಧಿಕಾರಿಗಳಿಗೆ ಆದೇಶ

ಇದರ ಬೆನ್ನಲ್ಲೇ ಮೇ 3ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ಬಳಿಗೆ ಹೋಗಿತ್ತು. ಆಯುಕ್ತರು ವರದಿ ನೀಡುವಂತೆ ವಿಶೇಷ ಆಯುಕ್ತರಿಗೆ (ಆಡಳಿತ) ಸೂಚಿಸಿದರು ಎಂದು ವೀರೇಶ್ ತಿಳಿಸಿದರು. ಗಿರಿನಾಥ್ ಅವರು ದೂರು ಸ್ವೀಕರಿಸಿದ್ದು, ವರದಿ ನೀಡುವಂತೆ ಅಧಿಕಾರಿಗೆ ಸೂಚಿಸಿದ್ದಾರೆ.

ವಿಶೇಷ ಆಯುಕ್ತರ ಕಚೇರಿಯ ಅಧಿಕಾರಿಗಳ ಪ್ರಕಾರ, ಲೇಔಟ್‌ನಲ್ಲಿನ ಬಿಡಿಎ ಫೈಲ್‌ಗಳು ಎನ್‌ಒಸಿಗಳನ್ನು ಹೊಂದಿವೆ. ನಾವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಯಾವುದೇ ದುರುಪಯೋಗವಾಗಿಲ್ಲ. ಆದರೆ, ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತರು ಪರಿಶೀಲನೆ ನಡೆಸಿದರೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆರ್‌ಟಿಐ ಕಾರ್ಯಕರ್ತ ರಾವ್‌ಗೆ ಬೆದರಿಕೆ ಹಾಕಿರುವ ಆರೋಪ ಹೊತ್ತಿರುವ ಇನ್ಸ್‌ಪೆಕ್ಟರ್, ತನಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here