Home Uncategorized ಬೀದರ್: ಸ್ವಂತ ಕಟ್ಟಡವಿಲ್ಲದೆ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್; ಇಲ್ಲೂ ಸೌಲಭ್ಯಗಳ ಕೊರತೆ

ಬೀದರ್: ಸ್ವಂತ ಕಟ್ಟಡವಿಲ್ಲದೆ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್; ಇಲ್ಲೂ ಸೌಲಭ್ಯಗಳ ಕೊರತೆ

33
0

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ (Aurad taluk) ಬಲ್ಲೂರು (ಜೆ) ಗ್ರಾಮದಲ್ಲಿ ನಡೆಯಬೇಕಾಗಿದ್ದ ವತಸಿ ಶಾಲೆ (Hostel Problem)ಯನ್ನ ಬೀದರ್ ತಾಲೂಕಿನ ಜನವಾಡಾ ಗ್ರಾಮದ ಬಳಿಯ ಒಂದು ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತಿದೆ. ಒಂದು ತಾಲೂಕಿಗೆ ಮಂಜೂರಾದ್ ಹಾಸ್ಟೇಲ್ ಅನ್ನ ಇನ್ನೊಂದು ತಾಲೂಕಿನಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಿದ್ದಾಗಲೂ ಬೇರೆ ತಾಲೂಕಿನಿಂದ ಇಂದಿರಾಗಾಂಧಿ ಹಾಸ್ಟೇಲ್ (Indira Gandhi Hostel) ಅನ್ನ ಎತ್ತಂಗಡಿ ಮಾಡಿಕೊಂಡು ಬಂದು ಬಾಡಿಗೆಯಾಸೆಗಾಗಿ ಇಲ್ಲಿ ತಂದು ನಡೆಸಲಾಗುತ್ತಿದೆ. ಮೊದಲೇ ಸೂಕ್ತ ಕಟ್ಟಡವಿಲ್ಲದೆ ಪರದಾಡುತ್ತಿದ್ದ ಮಕ್ಕಳಿಗೆ ಮತ್ತೊಂದು ಹಾಸ್ಟೆಲ್​ ಅನ್ನು ಇದರಲ್ಲೇ ನಡೆಸುತ್ತಿರುವುದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ.

ವಸತಿ ಶಾಲೆ ನಡೆಯುತ್ತಿರುವುದು ಹೈಟೆಕ್ ಮಾದರಿಯ ಕಟ್ಟಡದಲ್ಲ. ಬದಲಾಗಿ ಕಲ್ಯಾಣ ಮಂಟಪದಲ್ಲಿ ಈ ಶಾಲೆ ನಡೆಯುತ್ತಿದೆ. ಈ ವಸತಿ ಶಾಲೆಯಲ್ಲಿ 240 ಮಕ್ಕಳು ಓದುತ್ತಿದ್ದು ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳು ಒಂದೆ ಶಾಲೆಯಲ್ಲಿ ಓದುವ ಅವಕಾಶವಿದ್ದು ಎಲ್ಲಾ ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಈ ವಸತಿ ಶಾಲೆಯನ್ನ ಇಲ್ಲಿಗೆ ಶಿಪ್ಟ್ ಮಾಡಿದ್ದು ಅಂದಿನಿಂದಲೂ ಇದೆ ಕಲ್ಯಾಣ ಮಂಟಪದಲ್ಲಿಯೇ ಹಾಸ್ಟೆಲ್ ನಡೆಯುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಪಾರಿವಾಳ ಹಿಡಿಲು ಹೋಗಿ ವಿದ್ಯುತ್​ ಶಾಕ್​ಗೆ ಒಳಗಾಗಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಸಾವು

ಇದರಿಂದ ಮಕ್ಕಳಿಗೆ ಸಾಕಷ್ಟು ಕಲಿಕೆಗೆ ಅನಾನುಕೂಲವಾಗುತ್ತಿದ್ದು ಅಲ್ಲಿಯೇ ಊಟ, ಅಲ್ಲೇ ಪಾಠ, ಅಲ್ಲಿಯೇ ವಸತಿ, ಅಲ್ಲೆ ಸ್ನಾನ ಮಾಡಬೇಕಾದ ಸ್ಥಿತಿ ಇಲ್ಲಿನ ಮಕ್ಕಳಿಗಿದೆ. ಇನ್ನೂ, ಇಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಸ್ಥಿತಿಯಂತೂ ಗಣಗೋರವಾಗಿದ್ದು ಸ್ನಾನ ಮತ್ತು ಶೌಚಾಲಯಕ್ಕೆ ಹೋಗಲು ಸಾಕಷ್ಟು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಎದುರಿಸುತ್ತಿದ್ದಾರೆ. ರಾತ್ರಿ ನಿದ್ದೆ ಮಾಡುವುದು ಕೂಡಾ ಕಷ್ಟವಾಗಿದ್ದು ನಮಗೆ ಬೇರೆ ಕಡೆ ಸ್ಥಳಾಂತರ ಮಾಡಿಸಿ ಎಂದು ಇಲ್ಲಿನ ಮಕ್ಕಳು ಮನವಿ ಮಾಡುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here