Home Uncategorized ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊಂಡಾಡಿದ ವ್ಯಕ್ತಿಯ ಮೇಲೆ ಹಲ್ಲೆ!

ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊಂಡಾಡಿದ ವ್ಯಕ್ತಿಯ ಮೇಲೆ ಹಲ್ಲೆ!

32
0

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಕಾಂಗ್ರೆಸ್ ಪಕ್ಷವನ್ನು ಕೊಂಡಾಡಿದ ವ್ಯಕ್ತಿಯೊಬ್ಬನ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಅಮೃತಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಕಾಂಗ್ರೆಸ್ ಪಕ್ಷವನ್ನು ಕೊಂಡಾಡಿದ ವ್ಯಕ್ತಿಯೊಬ್ಬನ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಅಮೃತಹಳ್ಳಿಯಲ್ಲಿ ನಡೆದಿದೆ.

ಫುಡ್ ಡೆಲಿವರಿ ಏಜೆಂಟ್ ಆಗಿರುವ ವಿಕೆ.ರಂಗನಾಥ್ (33) ತಂದೆಯಾದ ಖುಷಿಗೆ ಪಾರ್ಟಿ ಏರ್ಪಡಿಸಿದ್ದರು. ಪಾರ್ಟಿಗೆ ರಂಗನಾಥ್ ಅವರ ಮೂವರು ರೂಮ್ ಮೇಟ್ ಗಳು ಕೂಡ ಭಾಗಿಯಾಗಿದ್ದರು. ಮದ್ಯಪಾನ ಮಾಡುವಾಗ ರಾಜಕೀಯ ವಿಚಾರಗಳ ಕುರಿತು ಚರ್ಚೆ ಆರಂಭವಾಗಿದೆ. ರೂಮ್ ಮೇಟ್ ಗಳು ಬಿಜೆಪಿ ಬೆಂಬಲಿಗರಾಗಿದ್ದರು. ಚರ್ಚೆ ವೇಳೆ ರಂಗನಾಥ್ ಕಾಂಗ್ರೆಸ್ ಪಕ್ಷವನ್ನು ಕೊಂಡಾಡಿದ್ದು, ಈ ವೇಳೆ ಮೂವರಿಗೆ ಸಿಟ್ಟು ಬಂದಿದೆ. ಕೂಡಲೇ ಬಿಯರ್ ಬಾಲಟಿಗಳಿಂದ ರಂಗನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವೃದ್ಧೆ ಹತ್ಯೆ ಪ್ರಕರಣ, ಮೂವರ ಬಂಧನ

ಘಟನೆ ಬಳಿಕ ರಂಗನಾಥ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹಲ್ಲೆ ನಡೆಸಿದ ಮಧುಸೂಧನ್, ಮನೋಜ್ ಕುಮಾರ್ ಹಾಗೂ ಬಿ ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಅಮೃತಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 324 ಮತ್ತು ಇತರೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಮೂವರ ಪೈಕಿ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಮೂವರ ಜೊತೆಗೆ ಅಮೃತಹಳ್ಳಿಯ ಈಶ್ವರ ದೇವಸ್ಥಾನದ ಬಳಿ ವಾಸವಿದ್ದೆ. ಹಲ್ಲೆಯಿಂದಾಗಿ ಕುತ್ತಿಗೆಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಇದೀಗ ಪ್ರತ್ಯೇಕವಾಗಿ ವಾಸವಿದ್ದೇನೆ. ಮೂವರು ಕೂಡ ಫುಡ್ ಡೆಲಿವರಿ ಏಜೆಂಟ್ ಗಳಾಗಿದ್ದರು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here