Home ಕರ್ನಾಟಕ ಬೆಂಗಳೂರು | ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಗುತ್ತಿಗೆ ನೌಕರ ಸೆರೆ, ಮಾಲು ವಶ

ಬೆಂಗಳೂರು | ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಗುತ್ತಿಗೆ ನೌಕರ ಸೆರೆ, ಮಾಲು ವಶ

13
0

ಬೆಂಗಳೂರು : ಗರ್ತಲಾ-ಎಸ್‍ಎಂವಿಟಿ ಎಕ್ಸ್‌ ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಗುತ್ತಿಗೆ ನೌಕರನನ್ನು ಬೆಂಗಳೂರು ರೈಲ್ವೇ ಪೊಲೀಸರು ಬಂಧಿಸಿದ್ದು, 33 ಲಕ್ಷ ರೂ.ಮೌಲ್ಯದ 32.88 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಬಂಧಿತನನ್ನು ರೈಲ್ವೇ ಹೊರಗುತ್ತಿಗೆ ನೌಕರ ದೀಪಕ್ ದಾಸ್(20) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ವಸ್ತುವನ್ನು ರೈಲು ನಂ.12504 ತ್ರಿಪುರಾದಿಂದ ಬೆಂಗಳೂರು ಬೈಯಪ್ಪನಹಳ್ಳಿ ರೈಲ್ವೇ ಟರ್ಮಿನಲ್‍ಗೆ ಸಾಗಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ರೈಲಿನೊಳಗೆ ಪ್ರಯಾಣಿಕರ ಹಾಸಿಗೆ ನೋಡಿಕೊಳ್ಳುತ್ತಿದ್ದ ಗುತ್ತಿಗೆ ನೌಕರ ದೀಪಕ್ ದಾಸ್ ಕಿಟ್ ಬ್ಯಾಗ್‍ನಲ್ಲಿ ಬಚ್ಚಿಟ್ಟಿದ್ದ 32.88 ಕೆಜಿ ಗಾಂಜಾವನ್ನು ಸಿಕ್ಕಿದೆ. ಈ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here