ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಬ್ಯಾರಿಸ್ ಪಬ್ಲಿಕ್ ಶಾಲೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಶಿಬಿರವು ಡಿ.10ರಂದು ನಗರದ ಬ್ಯಾರಿಸ್ ಪಬ್ಲಿಕ್ ಶಾಲೆಯಲ್ಲಿ ಜರುಗಿತು.
ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಾಗಾರದಲ್ಲಿ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ ಮಂಗಳೂರು ಉತ್ತರ ವಲಯ ಅವರು ಉಪಸ್ಥಿತರಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯು ಮುಂಚೂಣಿಯಲ್ಲಿರುವುದಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಪಾತ್ರವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಸಬ್ಬ ಪಿ ಬ್ಯಾರಿ ಮಾತನಾಡಿ ಮುಸ್ಲಿಂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಮೀಫ್ ನ ಮಹತ್ತರ ಪಾತ್ರವನ್ನು ವಿವರಿಸಿದರು. ಇನ್ನು ಮುಂದೆಯೂ ನಮ್ಮ ಜಿಲ್ಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿಸಲು ಶಿಕ್ಷಣ ಇಲಾಖೆಯ ಜೊತೆಗೆ ಮೀಫ್ ಕೈ ಜೋಡಿಸಲಿದೆ ಎಂಬುವುದನ್ನು ಮನವರಿಕೆ ಮಾಡಿದರು.
ವೇದಿಕೆಯಲ್ಲಿ ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ, ಪ್ರೋಗ್ರಾಂ ಕಾರ್ಯದರ್ಶಿ ಶಾರಿಖ್, ಸದಸ್ಯರು ಫರ್ವೇಝ್ ಅಲಿ, ಸಿರಾಜ್ ಜೋಕಟ್ಟೆ, ಬ್ಯಾರಿಸ್ ಶಾಲಾ ಪ್ರಾಂಶುಪಾಲರು ಖತೀಜತುಲ್ ಕುಬ್ರ, ಶಾಲಾ ಮುಖ್ಯಸ್ಥರು ಕಸ್ರ್ಟಿನ್ ಖಾನ್ ಉಪಸ್ಥಿತರಿದ್ದರು.
ಬ್ಯಾರಿಸ್ ಶಾಲಾ ಪ್ರಾಂಶುಪಾಲರು ಖತೀಜತುಲ್ ಕುಬ್ರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಕವಿತಾ ಸಿ ರಾವ್ ರವರು ಸ್ವಾಗತಿಸಿದರು. ಸವಿತಾ ಶೆಟ್ಟಿ ವಂದಿಸಿದರು. ಅನುಷಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳ ಪುನರ್ಬಲನ ಶಿಬಿರದಲ್ಲಿ ಜಿಲ್ಲೆಯ ಸರಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಂದ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಪ್ರಯೋಜನವನ್ನು ಪಡೆದುಕೊಂಡರು.
ಸಂಪನ್ನೂಲ ವ್ಯಕ್ತಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಇವರು ಪ್ರಾತ್ಯಕ್ಷಿಕೆಯೊಂದಿಗೆ ವಿಷಯವಾರು ಹಾಗೂ ವಿದ್ಯಾರ್ಥಿಗಳಿಗೆ ಪುನರ್ಬಲನ ಶಿಬಿರವನ್ನು ದಿನ ಪೂರ್ತಿ ನಡೆಸಿಕೊಟ್ಟರು.