ಭಾರತೀಯ ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ಅವರ ಉತ್ತಮ ಸೇವೆ ಮತ್ತು ತ್ಯಾಗ ನಮ್ಮ ಆಕಾಶವು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಡಾ ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಡಾ.ಪದ್ಮಜೀತ ನಾಡಗೌಡ ಸೈಕ್ಲಿಸ್ಟ್ ತಂಡದೊಂದಿಗೆ ವಿಭಿನ್ನವಾಗಿ ಭಾರತೀಯ ವಾಯುಸೇನಾ ದಿನಾಚರಣೆ ಮತ್ತು ವೀರ ಯೋಧರಿಗೆ ಸಮರ್ಪಣೆ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸಿದರು.
ವಾಯುಪಡೆಯ ದಿನದಂದು ಎಲ್ಲಾ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಡಾ. ವಾಯ್ ಎಮ್ ಪೂಜಾರಿ. ನಾಗರಾಜ್ ಕಾಡಾಪುರ. ಬಸು ಅಥಣಿ. ಜಯವರ್ಧನ ನಾಡಗೌಡ ಪಾಟೀಲ. ರಾಜು ಗಾಣಿಗೇರ. ಮಂಜುನಾಥ ಅರಬಳ್ಳಿ. ಶಿವಾನಂದ ಕಾಗಿ. ನಾಗೇಶ ಕೊಲ್ಲಾಪುರ. ಸಂಜಯ ಅಮ್ಮನಿಗಿಮಠ. ಪ್ರಸನ್ನ ಅರಬಳ್ಳಿ. ದಯಾನಂದ ದೇಸಾಯಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
The post ಭಾರತೀಯ ವಾಯು ಸೇನೆ ಕೆಲಸ ಶ್ಲಾಘನೀಯ: ಡಾ. ನಾಡಗೌಡ ಪಾಟೀಲ appeared first on Ain Live News.