Home Uncategorized ಮಂಗಳೂರು: ಹಳೇಯ ಬಲ್ಡಿಂಗ್ ಜೊತೆಗಿನ ಭಾವನಾತ್ಮಕ ಸಂಬಂಧ; ಕಟ್ಟಡ ಸ್ಥಳಾಂತರಿಸಲು 50 ಲಕ್ಷ ರೂ. ವೆಚ್ಚ ಮಾಡಿದ...

ಮಂಗಳೂರು: ಹಳೇಯ ಬಲ್ಡಿಂಗ್ ಜೊತೆಗಿನ ಭಾವನಾತ್ಮಕ ಸಂಬಂಧ; ಕಟ್ಟಡ ಸ್ಥಳಾಂತರಿಸಲು 50 ಲಕ್ಷ ರೂ. ವೆಚ್ಚ ಮಾಡಿದ ವ್ಯಕ್ತಿ!

22
0

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಕೆಲವು ಕಡೆ ಮನೆ, ಕಟ್ಟಡ ನೆಲಸಮವಾಗುವುದು ಸಾಮಾನ್ಯ. ಆದರೆ ಹಳೆ ಕಟ್ಟಡವೊಂದನ್ನು ಸಂರಕ್ಷಿಸುವ ಉದ್ದೇಶದಿಂದ ಅದನ್ನು ಬರೋಬ್ಬರಿ 130 ಅಡಿಯಷ್ಟು ದೂರಕ್ಕೆ ರೈಲ್ವೇ ಮಾದರಿ ಹಳಿಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ! ಮಂಗಳೂರು: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಕೆಲವು ಕಡೆ ಮನೆ, ಕಟ್ಟಡ ನೆಲಸಮವಾಗುವುದು ಸಾಮಾನ್ಯ. ಆದರೆ ಹಳೆ ಕಟ್ಟಡವೊಂದನ್ನು ಸಂರಕ್ಷಿಸುವ ಉದ್ದೇಶದಿಂದ ಅದನ್ನು ಬರೋಬ್ಬರಿ 130 ಅಡಿಯಷ್ಟು ದೂರಕ್ಕೆ ರೈಲ್ವೇ ಮಾದರಿ ಹಳಿಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ!

ನಗರದ 25 ವರ್ಷದ ಹಳೆಯ ವಾಣಿಜ್ಯ ಸಂಕೀರ್ಣವನ್ನು 50 ಲಕ್ಷ ರೂ.ವೆಚ್ಚದಲ್ಲಿ ಎತ್ತಿ ಹೊಸ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಮಂಗಳೂರು ಸಮೀಪದ ಗುರುಪುರ-ಕೈಕಂಬದಲ್ಲಿರುವ ಜಿ ರಾಜೇಶ್ ಪೈ ಅವರ ಎರಡು ಅಂತಸ್ತಿನ ಸಂಕೀರ್ಣವನ್ನು ಕೆಲವು ಸಮಯದ ಹಿಂದೆ ಮಂಗಳೂರು ಮತ್ತು ಕಾರ್ಕಳ ನಡುವೆ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸಲು ಕೆಡವಲು ಗುರುತಿಸಲಾಗಿತ್ತು.

ಸಂಕೀರ್ಣವನ್ನು ಈಗಿರುವ ಸ್ಥಳದಿಂದ 130 ಅಡಿ ದೂರಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಸಂಕೀರ್ಣದ ಸುಮಾರು 6,000 ಚದರ ಅಡಿ ಪ್ರದೇಶವನ್ನು ಕೆಡವಲು ಗುರುತಿಸಲಾಗಿದೆ. ಈ ಭಾಗವನ್ನು ಕತ್ತರಿಸಿ ಸಂಕೀರ್ಣವನ್ನು ಉಳಿಸಬಹುದಿತ್ತು. ಆದರೆ ಹೀಗೆ ಮಾಡಿದರೆ ವಾಹನ ನಿಲುಗಡೆಗೆ ಜಾಗವೇ ಇರುವುದಿಲ್ಲ. ಇದಲ್ಲದೆ,  ಅದರ ಜೊತೆಗಿನ ಬಾಂದವ್ಯದ ಕಾರಣ ಪೈ ಸಂಕೀರ್ಣದ ಮುಂಭಾಗದ ಭಾಗವನ್ನು ಕತ್ತರಿಸಲು ಇಷ್ಟವಿರಲಿಲ್ಲ.

ನಾನು ಬಹಳವಾಗಿ ಪೂಜಿಸುವ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಗಳು 1999 ರಲ್ಲಿ ಸಂಕೀರ್ಣವನ್ನು ಉದ್ಘಾಟಿಸಿದರು. ಕಟ್ಟಡಕ್ಕೆ ಏನೂ ಆಗುವುದಿಲ್ಲ ಎಂದು ಸ್ವಾಮೀಜಿ ನನಗೆ ಹೇಳಿದರು ಮತ್ತು ಅವರ ಮಾತುಗಳು ನನಗೆ ರಹಸ್ಯ ಎನಿಸಿದವು ಎಂದು ಪೈ ತಿಳಿಸಿದ್ದಾರೆ.

ಇದನ್ನೂ ಓದಿ: ‘ಶಕ್ತಿ ಯೋಜನೆ’: ಒಂದು ತಿಂಗಳಲ್ಲಿ 16 ಕೋಟಿಗೂ ಹೆಚ್ಚು ಮಹಿಳೆಯರಿಂದ ಸೌಲಭ್ಯ ಬಳಕೆ!

ಕೆಲವು ಸಿವಿಲ್ ಎಂಜಿನಿಯರ್‌ಗಳನ್ನು ಭೇಟಿಯಾದ ನಂತರ ಕಟ್ಟಡವನ್ನು ಬದಲಾಯಿಸುವ ತಂತ್ರಜ್ಞಾನದ ಬಗ್ಗೆ ತಿಳಿಸಿದರು. ಕೊಪ್ಪಳ, ಸಿರಗುಪ್ಪ ಮತ್ತು ಮಂಗಳೂರಿಗೆ ಭೇಟಿ ನೀಡಿ, ಕಟ್ಟಡ ಸ್ಥಳಾಂತರಗೊಳಿಸಿದ್ದ ಮಾಲೀಕರನ್ನು ವಿಚಾರಿಸಿದ್ದೆ ಎಂದು ತಿಳಿಸಿದ್ದಾರೆ.

ಅಂತಿಮವಾಗಿ, ನಾನು ಧೈರ್ಯ ಮಾಡಿ  ನನ್ನ ಕಟ್ಟಡವನ್ನು ಉಳಿಸಲು ನಿರ್ಧರಿಸಿದೆ. ಇದೇ ಕಟ್ಟಡ ನಿರ್ಮಾಣಕ್ಕೆ ನನಗೆ 1 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಅದನ್ನು ಬದಲಾಯಿಸಲು ನಾನು 50 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ಪೈ ಹೇಳಿದರು.

ಒಂದು ವಾರದ ಹಿಂದೆ ಸ್ಥಳಾಂತರ ಕಾರ್ಯ ಆರಂಭವಾಗಿದ್ದು, ಕಟ್ಟಡದ ಸ್ಥಳಾಂತರಕ್ಕೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಈ ಕಾರ್ಯವನ್ನು ನಿರ್ವಹಿಸುತ್ತಿರುವ ಹರಿಯಾಣ ಮೂಲದ ಎಚ್‌ಎಸ್‌ಬಿಎಲ್ ಬಿಲ್ಡಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿವಿಲ್ ಇಂಜಿನಿಯರ್ ವಿಶಾಲ್ ರಾಣಾ ಮಾತನಾಡಿ ಕಟ್ಟಡವನ್ನು ಜ್ಯಾಕ್‌ಗಳನ್ನು ಬಳಸಿ ಸುಮಾರು ಎರಡು ಅಡಿಗಳಷ್ಟು ಮೇಲಕ್ಕೆತ್ತಿ ನಂತರ ಅದರ ಕೆಳಗೆ ಇರಿಸಲಾಗಿರುವ ರೈಲು ಹಳಿಗಳನ್ನು ಬಳಸಿಕೊಂಡು ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಹೊಸ ಸ್ಥಳದಲ್ಲಿ, ಅದರ ಮೇಲೆ ಹಳೆಯ ರಚನೆಯನ್ನು ಇರಿಸಲು ಅಡಿಪಾಯವನ್ನು ಹೊಸದಾಗಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here