ಮಲ್ಪೆ, ಮೇ 8: ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಜೀವ ರಕ್ಷಕ ತಂಡ ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಮಲ್ಪೆ ಬೀಚ್ನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಬಾಲಕ ಶ್ರೇಯಸ್(12) ಎಂಬಾತ ಕುಟುಂಬ ಸಮೇತ ಬೀಚ್ಗೆ ಬಂದಿದ್ದನು. ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದ ಶ್ರೇಯಸ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಜೀವ ರಕ್ಷಕ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದೆ ಎಂದು ತಿಳಿದುಬಂದಿದೆ. ಆತನ ಅಪಾಯದಿಂದ ಪಾರಾಗಿ ದ್ದಾನೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಆರು ಮಂದಿ ಯುವಕರು ಮಲ್ಪೆ ಬೀಚ್ಗೆ ಬಂದಿದ್ದು, ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದ ಈ ಯುವಕರ ಪೈಕಿ ಇಬ್ಬರು ಅಲೆಗಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದರು ಎನ್ನಲಾಗಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಜೀವರಕ್ಷಕರ ತಂಡ ಗೋಪಿನಾಥ್(25) ಹಾಗೂ ರಂಗನಾಥ (26) ಎಂಬವರನ್ನು ರಕ್ಷಿಸಿದೆ ಎಂದು ತಿಳಿದುಬಂದಿದೆ.