Home Uncategorized ಮಾನವೀಯ ಕಾಳಜಿಯೇ ಅಮೃತರ ಕೃತಿಗಳ ಜೀವಾಳ: ವೀರಪ್ಪ ಮೊಯ್ಲಿ

ಮಾನವೀಯ ಕಾಳಜಿಯೇ ಅಮೃತರ ಕೃತಿಗಳ ಜೀವಾಳ: ವೀರಪ್ಪ ಮೊಯ್ಲಿ

32
0

ಮಂಗಳೂರು: ‘ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದ ಅಮೃತ ಸೋಮೇಶ್ವರರಲ್ಲಿ ಸಾಂಸ್ಕೃತಿಕ ಸೆಳೆತ ಇತ್ತು. ಅವರ ಕೃತಿಗಳಲ್ಲಿ ನೆಲದ ಮೂಲ ಸತ್ವ ಇದೆ. ಅದು ಎರವಲು ಸಾಹಿತ್ಯವಲ್ಲ. ಸಮಾಜಮುಖಿ ಮತ್ತು ಮಾನವೀಯ ಕಾಳಜಿಯೇ ಅವರ ಕೃತಿಗಳ ಜೀವಾಳ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಬಹುಮುಖಿ ಕವಿ ಮತ್ತು ವಿದ್ವಾಂಸ, ಈಚೆಗೆ ನಿಧನರಾದ ಸೋಮೇಶ್ವರರಿಗೆ ನುಡಿನಮನ ಸಲ್ಲಿಸಲು ನಗರದ ತುಳು ಭವನದಲ್ಲಿ ತುಳು ಪರಿಷತ್ ಶನಿವಾರ ಆಯೋಜಿಸಿದ್ದ ‘ಅಮೃತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶಿಷ್ಟ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಮೃತರ ಕೃತಿಗಳು ಶಿವರಾಮ ಕಾರಂತರ ಕೃತಿಗಳಷ್ಟೇ ಪ್ರಭಾವ ಬೀರು ವಂಥವು. ಹೀಗಾಗಿ ಅವುಗಳ ಅಧ್ಯಯನ ಆಗಬೇಕು ಸಲಹೆ ನೀಡಿದರು.

ಸಾಹಿತ್ಯದಲ್ಲಿ ಮೌಲ್ಯಗಳು ಹೃದಯದಾಳದಿಂದ ಬರಬೇಕು, ಅದರಲ್ಲಿ ನೆಲದ ಗುಣ ಇರಬೇಕು ಎಂಬುದಕ್ಕೆ ಅವರ ಸಾಹಿತ್ಯ ಉದಾಹರಣೆ. ಇಂಥ ಸಾಹಿತ್ಯದ ಅಧ್ಯಯನ, ತುಳು ಆಕಾಡೆಮಿಯ ಪ್ರಮುಖ ಕಾರ್ಯ ಆಗಬೇಕು’ ಎಂದು ಮೊಯ್ಲಿ ನುಡಿದರು

ಅಮೃತರ ಪುತ್ರ ಚೇತನ್ ಸೋಮೇಶ್ವರ ಮಾತನಾಡಿ ತಂದೆಯವ ವೈಯಕ್ತಿಕ ಜೀವನ ವಿಭಿನ್ನವಾಗಿತ್ತು ತಂದೆ ಅಮೃತರು ಜನರ ಕವಿಯಾಗಿದ್ದರು. ಅವರು ಬರೆದ ಹಾಡುಗಳು ಮಂಗಳೂರಿನ ಸಿಟಿ ಬಸ್‌ಗಳಲ್ಲಿ ಹಿಂದೊಮ್ಮೆ ಅಲೆ ಅಲೆಯಾಗಿ ತೇಲು ತ್ತಿದ್ದವು. ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು ಲಕ್ಷಾಂತರ ಮಂದಿಯ ಹೃದಯ ತಣಿಸಿವೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ತಿರಸ್ಕರಿಸಿದ್ದ ಅವರು ಉಡುಪಿ ಮಠದಲ್ಲಿ ಸನ್ಮಾನಕ್ಕೂ ಒಪ್ಪಿರಲಿಲ್ಲ. ಸ್ವಸ್ಥ ಸಮಾಜ ಬಯಸಿದ್ದ ಅವರ ಕನಸು ನನಸು ಮಾಡಿ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು’ ಎಂದು ಚೇತನ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ ‘ಅಮೃತರ ಕೃತಿಗಳಲ್ಲಿ ವೈಚಾರಿಕತೆ ಮತ್ತು ಮಾನವೀಯ ಗುಣ ಇದೆ. ಕ್ರಾಂತಿಯ ಅಂಶವಿದ್ದರೂ ಭಾಷೆಯಲ್ಲಿ ಅಬ್ಬರವಿಲ್ಲ. ಸಮಾಜದ ಅಂಕು ಡೊಂಕು ಎತ್ತಿತೋರಿಸುವ ವೇಳೆ ಚುಚ್ಚುವ ಗುಣ ಇರಲಿಲ್ಲ’ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ, ರಂಗಕರ್ಮಿ ತಮ್ಮ ಲಕ್ಷ್ಮಣ ನಿವೃತ್ತ ಪ್ರಾಧ್ಯಾಪಕ ಶಿವರಾಮ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಮುಂತಾದವರು ಮಾತನಾಡಿದರು.

LEAVE A REPLY

Please enter your comment!
Please enter your name here