ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಶನಿವಾರ ಐಪಿಎಲ್ ಪಂದ್ಯ ಆರಂಭಕ್ಕೆ ಮೊದಲು ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್ಗಳು ಹಾಗೂ ಸಹಾಯಕ ಸಿಬ್ಬಂದಿಗಳ ಜೊತೆ ದೀರ್ಘ ಸಮಯ ಮಾತುಕತೆ ನಡೆಸಿದ್ದು, ಮುಂಬರುವ ಐಪಿಎಲ್ ವೇಳೆಗೆ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ರೋಹಿತ್ ತೊರೆಯಲಿದ್ದಾರೆಂಬ ವದಂತಿಗೆ ಮತ್ತಷ್ಟು ಪುಷ್ಟಿಕೊಟ್ಟಿದೆ.
ಈಡನ್ಗಾರ್ಡನ್ಸ್ನಲ್ಲಿ ಶನಿವಾರ ಮಳೆ ಸುರಿದ ಕಾರಣ ಮುಂಬೈ ಹಾಗೂ ಕೆಕೆಆರ್ ನಡುವಿನ ಪಂದ್ಯ ವಿಳಂಬವಾಗಿ ಆರಂಭವಾಯಿತು. ಈ ವೇಳೆ ರೋಹಿತ್ ಕೆಕೆಆರ್ನ ಡ್ರೆಸ್ಸಿಂಗ್ರೂಮ್ನಲ್ಲಿ ಕಾಣಿಸಿಕೊಂಡಿದ್ದು ಕೆಕೆಆರ್ನ ಸಹಾಯಕ ಕೋಚ್ ಅಭಿಷೇಕ್ ನಾಯರ್, ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆ ಮಾತನಾಡಿದರು. ಈ ವೇಳೆ ಆಟಗಾರರಾದ ಮನೀಶ್ ಪಾಂಡೆ ಹಾಗೂ ಕೆ.ಎಸ್.ಭರತ್ ಉಪಸ್ಥಿತರಿದ್ದರು.
ಹಾರ್ದಿಕ್ ಪಾಂಡ್ಯ ವಿದಾದಾತ್ಮಕ ರೀತಿಯಲ್ಲಿ ತನ್ನಿಂದ ಮುಂಬೈ ತಂಡದ ನಾಯಕತ್ವವನ್ನು ಸ್ವೀಕರಿಸಿದ ನಂತರ ಓಪನರ್ ರೋಹಿತ್ ಫ್ರಾಂಚೈಸಿಯ ಬಗ್ಗೆ ಅಸಮಾಧಾನಗೊಂಡಿದ್ದರು. ಈ ವರ್ಷದ ಐಪಿಎಲ್ ನಂತರ ರೋಹಿತ್ ಮುಂಬೈ ತಂಡವನ್ನು ತ್ಯಜಿಸಲಿದ್ದಾರೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿತ್ತು.
ಶನಿವಾರ ಕೆಕೆಆರ್ ಕೋಚ್ಗಳನ್ನು ರೋಹಿತ್ ಭೇಟಿಯಾಗಿರುವುದು ಬಹಳಷ್ಟು ಕುತೂಹಲ ಕೆರಳಿಸಿದೆ.
ರೋಹಿತ್ ಹಾಗೂ ನಾಯರ್ ಇರುವ ವೀಡಿಯೊವನ್ನು ಕೆಕೆಆರ್ ಪೋಸ್ಟ್ ಮಾಡಿದ್ದು ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಕೆಕೆಆರ್ ನಂತರ ಡಿಲಿಟ್ ಮಾಡಿದೆ. ವೀಡಿಯೊ ಕ್ಲಿಪ್ನಲ್ಲಿ ರೋಹಿತ್ ಅವರು ಪ್ರಸಕ್ತ ಋತುವಿನಲ್ಲಿ ಮುಂಬೈ ತಂಡದಲ್ಲಿ ಆಗುತ್ತಿರುವ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Rohit Sharma having a long chat with KKR players and support staff. pic.twitter.com/wU4VMPHS3p
— Mufaddal Vohra (@mufaddal_vohra) May 11, 2024