ಮಂಗಳೂರು, ಮಾ.14: ಕೂಳೂರಿನ ಯೆನೆಪೋಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಮುಡಿಪು ಸಮೀಪದ ಮೂಳೂರು ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ನಡೆಸಿದರು.
ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಸುಕನ್ಯಾ ರೈ ಶಿಬಿರವನ್ನು ಉದ್ಘಾಟಿಸಿದರು. ಅತಿಥಿಯಾಗಿ ಉಪ ಪ್ರಾಂಶುಪಾಲ ಜೀವನ್ರಾಜ್ ಕುತ್ತಾರ್, ಶ್ರೀನಾಥ್ ಕೊಂಡೆ, ಎಸ್ಡಿಎಂಸಿ ಅಧ್ಯಕ್ಷ ಸುಲೈಮಾನ್ ಮೊಯ್ದಿನ್ ಅಬ್ಬಾಸ್, ಎಸ್ಡಿಎಂಸಿ ಗೌರವಾಧ್ಯಕ್ಷ ರಮೇಶ್ ಶೇವಣ, ಉಮ್ಮರ್, ರಾಧಾಕೃಷ್ಣ ರೈ ಉಮ್ಯ, ಸಬೀನಾ, ಇಬ್ರಾಹಿಂ ತಬ್ಸಿಯಾ, ಮೂಳೂರು ಜುಮಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಹಾಜಿ, ಬಶೀರ್ ಎಂ.ಪಿ, ಶಾಲಾ ಸಹಶಿಕ್ಷಕ ರವಿಕಿರಣ್, ಸಂತೋಷ್ ಕುಮಾರ್ ರೈ, ಶಿವನಂದನ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಅರುಣ್ ಎ. ಭಾಗವತ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಯೆನೆಪೋಯ ಪರಿಗಣಿಸಲ್ಪಟ್ಟ ವಿವಿಯ ಎನ್ಎಸ್ಎಸ್ ಸಂಯೋಜಕ ಡಾ. ಅಶ್ವಿನಿ ಎಸ್. ಶೆಟ್ಟಿ ಬಹುಮಾನ ವಿತರಿಸಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ನಿಯಾಝ್ ಪಿ. ಸ್ವಾಗತಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಲಿಂಟಾ ಜೋಯ್ ವಂದಿಸಿದರು. ಎನ್ನೆಸ್ಸೆಸ್ ಶಿಬಿರಾರ್ಥಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.