Home Uncategorized ಮುಸ್ಲಿಮೇತರರೊಂದಿಗೆ ಸಹಬಾಳ್ವೆ ನಡೆಸಿರಿ: ಶೈಖ್ ರಾಝಿಕ್ ಸೌದಾಗರ್ ನಝೀರಿ ಕರೆ

ಮುಸ್ಲಿಮೇತರರೊಂದಿಗೆ ಸಹಬಾಳ್ವೆ ನಡೆಸಿರಿ: ಶೈಖ್ ರಾಝಿಕ್ ಸೌದಾಗರ್ ನಝೀರಿ ಕರೆ

24
0

ಮಂಗಳೂರು: ಮುಸ್ಲಿಮೇತರರೊಂದಿಗೆ ಶಾಂತಿ- ಸೌಹಾರ್ದತೆಯೊಂದಿಗೆ ಸಹ ಬಾಳ್ವೆ ನಡೆಸುವಂತೆ ಶೈಖ್ ರಾಝಿಕ್ ಸೌದಾಗರ್ ನಝೀರಿ ಕರೆ ನೀಡಿದ್ದಾರೆ.

ಕರ್ನಾಟಕ ಸಲಫಿ ಅಸೋಸಿಯೇಷನ್(ರಿ), ಮಂಗಳೂರು ಇದರ ವಿದ್ಯಾರ್ಥಿ ಘಟಕ ಕೆಎಸ್‌ಎ ಸ್ಟೂಡೆಂಟ್ಸ್ ರವಿವಾರ ಆಯೋಜಿಸಿದ teanspath ವಿದ್ಯಾರ್ಥಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಲ್ ಬಯಾನ್ ಕಾಲೇಜಿನ ಪ್ರಾಧ್ಯಾಪಕರಾದ ಶೈಖ್ ಡಾ. ತಾರಿಖ್ ಸಫಿಯುರ‌್ ರಹ್ಮಾನ್ ಮುಬಾರಕ್’ಪುರಿಯವರು ಉದ್ಘಾಟಿಸಿದರು.

ಜನಾಬ್ ಝಾಯಿದ್ ಪಟೇಲ್ ಮುಂಬೈ ಮಾತನಾಡಿ ಊಹೆಯನ್ನು ತ್ಯಜಿಸಿರಿ ಸತ್ಯವನ್ನು ಅಂಗೀಕರಿಸಿ ಬದಲಾವಣೆಗೆ ತಯಾರಾಗಲು ಉಪದೇಶಿಸಿದರು.

ನಿಶಾದ್ ಸ್ವಲಾಹಿಯವರು ಮಾತನಾಡುತ್ತಾ ಡ್ರಗ್ಸ್ ನ ಅಪಾಯದ ಬಗ್ಗೆ ವಿವರಿಸಿದರು. ಡಾ. ಅಫ್ತಾಬ್ ನಝೀರ್ ಕುರ್ ಆನ್ ಮತ್ತು ವಿಜ್ಞಾನ ಎಂಬ ವಿಷಯವನ್ನು ಮಂಡಿಸಿದರು.

ಮುಖ್ಯ ಅತಿಥಿ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಮಾತನಾಡಿ, ಮಾದಕ ಪದಾರ್ಥಗಳು ವೈಯಕ್ತಿಕ ಮತ್ತು ಕೌಟುಂಬಿಕವಾಗಿ ಮಾತ್ರವಲ್ಲ ಸಾರ್ವತ್ರಿಕವಾಗಿ ಸಮಾಜವನ್ನು ಹಾಳು ಮಾಡುತ್ತದೆ. ಆದ್ದರಿಂದ ಅವುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು ಎಂದು ಹೇಳಿದರು.

. ಇಜಾಝ್ ಸ್ವಲಾಹಿ, ಡಾ. ಹಫೀಜ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ ಮಾತಾಡಿದರು.

ಸಯ್ಯದ್ ಶಾಝ್ ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here