Home Uncategorized ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು; ಅವಶೇಷಗಳು ಮೋರಿಯಲ್ಲಿ ಪತ್ತೆ

ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು; ಅವಶೇಷಗಳು ಮೋರಿಯಲ್ಲಿ ಪತ್ತೆ

28
0

ಮೈಸೂರು: ಕೆಲವು ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದ ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜನ್ನು ತೆರವುಗೊಳಿಸಲಾಗಿದೆ. ಬಸ್​​ ಶೆಲ್ಟರ್​​ ಮೇಲಿದ್ದ ಮೂರು ಗುಂಬಜ್​ಗಳ ಪೈಕಿ 2 ಗುಂಬಜ್ ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಮೈಸೂರಿನ ಜೆಎಸ್​ಎಸ್​ ಕಾಲೇಜು ಬಳಿ ಇರುವ ಬಸ್ ಶೆಲ್ಟರ್​​​​​ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್​​ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್​​ ಶೆಲ್ಟರ್​ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಶಿಖರ ಮತ್ತ ಗುಂಬಜ್ ಗಳ ನಡುವೆ ವ್ಯತ್ಯಾಸವಿದೆ ಆದರೆ ಎರಡಕ್ಕೂ ಧಾರ್ಮಿಕ ವೈಶಿಷ್ಟ್ಯತೆಗಳಿವೆ: ಸೆಲ್ವಪಿಳ್ಳೆ ಅಯ್ಯಂಗಾರ್, ಇತಿಹಾಸಜ್ಞ

ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದ

ಇನ್ನು ಈ ಘಟನೆ ಸಂಬಂಧ ಗುಂಬಜ್​​ ತೆರವು ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮಸೀದಿ ಬಸ್ ಶೆಲ್ಟರ್ ಪೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಂಬಜ್​ ಅಕ್ಕಪಕ್ಕ 2 ಚಿಕ್ಕ ಗುಂಬಜ್ ಇದೆ. ಹೀಗೆ​ ಇದ್ದರೆ ಅದು ಮಸೀದಿನೆ, ಅದನ್ನು ತೆರವು ಮಾಡಿಸುವೆ ಎಂದಿದ್ದೆ. ಅದರಂತೆ ನಾನು ನಡೆದುಕೊಂಡಿದ್ದೇನೆ. ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದಗಳು. ಜನಾಭಿಪ್ರಾಯಕ್ಕೆ ತಲೆಬಾಗಿದ ಶಾಸಕ ರಾಮದಾಸ್​ಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು. pic.twitter.com/9b1wPLULJ4

— Pratap Simha (@mepratap) November 27, 2022

ಮತ್ತೊಂದೆಡೆ ತೆರವುಗೊಳಿಸಿದ್ದ ಡೂಮ್ ಅವಶೇಷಗಳು ಮೋರಿಯಲ್ಲಿ ಪತ್ತೆಯಾಗಿವೆ. ಕೆಲಸಗಾರರು ಬಸ್ ಶೆಲ್ಟರ್ ಪಕ್ಕದ ಮೋರಿಗೆ ಅವಶೇಷಗಳನ್ನು ಎಸೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here