ಅಮ್ರೇಲಿ: ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳಕಾರಿ ಹೇಳಿಕೆಯನ್ನು ನೀಡಿದ್ದ ಆರೋಪದಲ್ಲಿ ಮಾಜಿ ಕಾಂಗ್ರೆಸ್ ಸಂಸದ ವೀರಜಿ ಥುಮ್ಮರ್ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಯಾರನ್ನೂ ನೋಯಿಸುವುದು ತನ್ನ ಉದ್ದೇಶವಾಗಿರಲಿಲ್ಲ, ಸಾರ್ವಜನಿಕರ ಪರವಾಗಿ ಧ್ವನಿಯನ್ನು ತಾನು ಎತ್ತಿದ್ದೆ ಅಷ್ಟೇ ಎಂದು ಥುಮ್ಮರ್ ಹೇಳಿದ್ದಾರೆ.
ಡಿ.22ರಂದು ನಡೆದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಥುಮ್ಮರ್ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು,ಅವರನ್ನು ದಲ್ಲಾಳಿ ಎಂದು ಕರೆದಿದ್ದರು ಎಂದು ಬಿಜೆಪಿಯ ಅಮ್ರೇಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೆಹುಲ್ ಧೋರಜಿಯಾ ಶನಿವಾರ ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.