ಗದಗ: ರೈತರ ಬೆಳೆಗಳನ್ನು ರಕ್ಷಿಸಲು ಪಂಪ್ ಸೆಟ್ ಗಳಿಗೆ ಆರು ಘಂಟೆಗಳ ಕಾಲ ವಿದ್ಯುತ್ ನೀಡಲಾಗುವುದು ಅಂತಾ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ರು.
ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ಸಿಎಂ ಸಭೆ ನಡೆಸಿ 5 ಘಂಟೆಗಳ ಕಾಲ ವಿದ್ಯುತ್ ನೀಡಲು ಸೂಚಿಸಿದ್ರು. ಕೆಲ ಕಡೆ ಕಬ್ಬು, ಭತ್ತ ಬೆಳೆಗಳು ಇರೋದ್ರಿಂದ ಇನ್ನೂ ಹೆಚ್ಚಿನ ವಿದ್ಯುತ್ ಕೊಡೋ ಅನಿವಾರ್ಯತೆ ಕಾರಣದಿಂದಾಗಿ ಮುಖ್ಯಮಂತ್ರಿಗಳ ಅದೇಶದಂತೆ ನಿರಂತರವಾಗಿ ಅಥವಾ 4 ತಾಸು + ಎರಡು ತಾಸು ಒಟ್ಟು ಅರು ಘಂಟೆಗಳ ಕಾಲ ಹಗಲು ಮತ್ತು ರಾತ್ರಿ ಪಾಳಿಯಲ್ಲಿ 3 ಫೇಸ್ ವಿದ್ಯುತ್ ನೀಡಲಾಗುವುದು.
ಗದಗ ಜಿಲ್ಲೆಯಲ್ಲಿ ಇದು ಜಾರಿಗೊಳ್ತದೆ ಹಾಗಾಗಿ ರೈತರು ಸಹಕಾರ ನೀಡಬೇಕು ಎಂದರು.
The post ರೈತರ ಪಂಪ್ ಸೆಟ್ ಗಳಿಗೆ 6 ಗಂಟೆಗಳು ವಿದ್ಯುತ್ ಪೂರೈಕೆ- ಸಚಿವ ಎಚ್ ಕೆ ಪಾಟೀಲ್ appeared first on Ain Live News.