Home ಕರ್ನಾಟಕ ಲೋಕಸಭಾ ಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಕುಮಾರಸ್ವಾಮಿ ನಿರ್ಧಾರ?

ಲೋಕಸಭಾ ಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಕುಮಾರಸ್ವಾಮಿ ನಿರ್ಧಾರ?

29
0

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ  ಮಂಡ್ಯದಿಂದ  ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ ಎಂದು  ವರದಿಯಾಗಿದೆ.

ಸಿ.‌ ಎಸ್ ಪುಟ್ಟರಾಜು ಬದಲು ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಕುಮಾರ ಸ್ವಾಮಿ ಅವರಿಗೆ ಇತರ ಅಭ್ಯರ್ಥಿಗಳಿಗಿಂತ ಹೆಚ್ಚಿನ ಬೆಂಬಲಿಗರಿದ್ದು, ಸಿ.‌ ಎಸ್ ಪುಟ್ಟರಾಜು ಬದಲು ಕುಮಾರ ಸ್ವಾಮಿ ಸ್ಪರ್ಧಿಸಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿಯನ್ನು ಎದುರಿಸಬೇಕಾದರೆ ಇತರ ಅಭ್ಯರ್ಥಿಗಳಿಗಿಂತ ಕುಮಾರ ಸ್ವಾಮಿ ಅವರೇ ಸಮರ್ಥರು. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಇದು ಅನುಕೂಲವಾಗಲಿದೆ  ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿದೆ. 

ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಸಿ.‌ ಎಸ್ ಪುಟ್ಟರಾಜು ಅವರ ಹೇಸರು ಕೇಳಿ ಬರುತ್ತಿದ್ದರೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎನ್ನಲಾಗಿದೆ, 

LEAVE A REPLY

Please enter your comment!
Please enter your name here