Home Uncategorized ವರ್ತೂರು ಕೆರೆಯಲ್ಲಿ ಶೇ 95 ರಷ್ಟು, ಬೆಳ್ಳಂದೂರು ಕೆರೆಯ ಶೇ 52 ರಷ್ಟು ಹೂಳು ತೆರವುಗೊಳಿಸುವ...

ವರ್ತೂರು ಕೆರೆಯಲ್ಲಿ ಶೇ 95 ರಷ್ಟು, ಬೆಳ್ಳಂದೂರು ಕೆರೆಯ ಶೇ 52 ರಷ್ಟು ಹೂಳು ತೆರವುಗೊಳಿಸುವ ಕಾರ್ಯ ಪೂರ್ಣ

31
0

ವರ್ತೂರು ಕೆರೆಯಲ್ಲಿ ತೆರವುಗೊಳಿಸಿದ ಹೂಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗಿದೆ. ಹೂಳು ಸಾಗಿಸುತ್ತಿದ್ದ ಲಾರಿಗಳ ಚಲನವಲನವನ್ನು ಜಿಪಿಎಸ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, ಬೆಳ್ಳಂದೂರು ಕೆರೆಯ ಹೂಳು ವಿಟ್ಟಸಂದ್ರ ಮತ್ತು ಮೈಸ್ಲಾಂದ್ರ ಕ್ವಾರಿ ಹೊಂಡಗಳಿಗೆ ರವಾನೆಯಾಗುತ್ತಿದೆ ಎಂದರು. ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾಜಿ ಸದಸ್ಯ ಪ್ರೊ. ಟಿ.ವಿ. ರಾಮಚಂದ್ರ ಮತ್ತು ಬೆಳ್ಳಂದೂರು ಹಾಗೂ ವರ್ತೂರಿನ ನಿವಾಸಿಗಳ ಸಮಿತಿಗಳು ಸೋಮವಾರ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪರಿಶೀಲನೆ ನಡೆಸಿದರು. ಇದೇ ವೇಳೆ, ವರ್ತೂರು ಕೆರೆಯ ಶೇ 95 ರಷ್ಟು ಮತ್ತು ಬೆಳ್ಳಂದೂರು ಕೆರೆಯ ಶೇ 52 ರಷ್ಟು ಹೂಳು ತೆರವುಗೊಂಡಿದ್ದು, ಜೌಗು ಪ್ರದೇಶದ ಕಾಮಗಾರಿ ಆರಂಭಿಸಬಹುದು ಎಂಬ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದೆ.

ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್. ಅರವಿಂದ್ ಮಾತನಾಡಿ, ವರ್ತೂರು ಕೆರೆಯಲ್ಲಿ ತೆರವುಗೊಳಿಸಿದ ಹೂಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗಿದೆ. ಹೂಳು ಸಾಗಿಸುತ್ತಿದ್ದ ಲಾರಿಗಳ ಚಲನವಲನವನ್ನು ಜಿಪಿಎಸ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, ಬೆಳ್ಳಂದೂರು ಕೆರೆಯ ಹೂಳು ವಿಟ್ಟಸಂದ್ರ ಮತ್ತು ಮೈಸ್ಲಾಂದ್ರ ಕ್ವಾರಿ ಹೊಂಡಗಳಿಗೆ ರವಾನೆಯಾಗುತ್ತಿದೆ ಎಂದರು.

ಐಐಎಸ್‌ಸಿಯ ಪರಿಸರ ವಿಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ರಾಮಚಂದ್ರ ಮತ್ತು ನಿವಾಸಿಗಳು ಸರ್ಕಾರಿ ಏಜೆನ್ಸಿಗಳನ್ನು ಈಗಲೇ ಜೌಗು ಪ್ರದೇಶದ ಕೆಲಸವನ್ನು ಪ್ರಾರಂಭಿಸುವಂತೆ ಕೇಳಿಕೊಂಡರು.

ಮುಂಗಾರು ಪೂರ್ವದಲ್ಲಿ ಬೆಳ್ಳಂದೂರು ಕೆರೆಯಲ್ಲಿ ಶೇ 60ರಷ್ಟು ಹೂಳು ತೆಗೆಯಲಾಗುವುದು. ಬೆಳ್ಳಂದೂರಿನಲ್ಲಿ ಎರಡು ಮತ್ತು ವರ್ತೂರಿನಲ್ಲಿ ಒಂದು ಜೌಗು ಪ್ರದೇಶವನ್ನು ಸುಧಾರಿಸಲಾಗುವುದು ಎಂದು ಅರವಿಂದ್ ಹೇಳಿದರು. ರಾಮಚಂದ್ರ ಅವರು ತಿರುವು ಚಾನಲ್ ಅನ್ನು ತೆರವುಗೊಳಿಸಲು ಕೇಳಿದ್ದಾರೆ. ಆದರೆ, ಯಾವುದೇ ಕೊಳಚೆನೀರು ಕೆರೆಗಳಿಗೆ ಸೇರುವುದಿಲ್ಲ ಎಂದು ಬಿಡಬ್ಲ್ಯುಎಸ್ಎಸ್‌ಬಿನಿಂದ ಲಿಖಿತ ಭರವಸೆ ಅಗತ್ಯವಿದೆ ಎಂದರು.

ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಯಿಂದ ವರ್ತೂರು ಕೆರೆಗೆ ಸೇರುತ್ತಿದೆ ವಿಷಕಾರಿ ದ್ರವ!

ರಾಮಚಂದ್ರ ಅವರು ಒಳಚರಂಡಿ ಸಂಸ್ಕರಣಾ ಘಟಕದ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಪ್ರವಾಹವನ್ನು ತಗ್ಗಿಸಲು ನಾಗರಿಕ ಸಂಸ್ಥೆ ನಿರ್ಮಿಸಿದ ಸಮಾನಾಂತರ ಚರಂಡಿಯಲ್ಲಿ ಕೊಳಚೆ ನೀರನ್ನು ಸಾಗಿಸುತ್ತಿರುವುದರಿಂದ ಬಿಡಬ್ಲ್ಯುಎಸ್ಎಸ್‌ಬಿಯ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಬಿಡಬ್ಲ್ಯುಎಸ್ಎಸ್‌ಬಿ 2019ರ ವೇಳೆಗೆ ಬೆಳ್ಳಂದೂರಿನಲ್ಲಿ ನೂರಕ್ಕೆ ನೂರು ಪ್ರತಿಶತ ಶುದ್ಧೀಕರಿಸಿದ ನೀರಿನ ಭರವಸೆ ನೀಡಿತು. ಆದರೆ, ಅದು ಇನ್ನೂ ಆಗಿಲ್ಲ’ ಎಂದು ಅವರು ಹೇಳಿದರು.

ಕೆಸಿ ವ್ಯಾಲಿಯಿಂದ ಆನೇಕಲ್‌ಗೆ ನೀರು ಸಾಗಿಸುವ ಯೋಜನೆಯಿಂದಾಗಿ ಬಿಡಬ್ಲ್ಯುಎಸ್‌ಎಸ್‌ಬಿ ಕೆರೆಯ ಮಧ್ಯದಲ್ಲಿ ಪೈಪ್‌ಗಳನ್ನು ಹಾಕಿದ್ದು, ಕೆರೆಯ ವಿಭಜನೆಯಾಗಿದೆ. ಬಫರ್ ಜೋನ್ ಅತಿಕ್ರಮಣ ಇನ್ನೂ ಗೋಚರಿಸುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ವರ್ತೂರು ಕೆರೆಯಲ್ಲಿ ಮತ್ತೆ ನೊರೆಯ ಸಮಸ್ಯೆ: ಕೋಲಾರಕ್ಕೆ ತಲುಪಬೇಕಾದ ನೀರು ಚರಂಡಿ ಪಾಲು

ಬೆಳ್ಳಂದೂರು-ಇಬ್ಲೂರು ನಿವಾಸಿ ಹಾಗೂ ತಂಡದ ಸದಸ್ಯೆ ಸೋನಾಲಿ ಸಿಂಗ್ ಮಾತನಾಡಿ, ಕಳೆದ ವರ್ಷ ಮುಂಗಾರು ಹದಗೆಟ್ಟಿದ್ದರೂ, ಎರಡು ಕೆರೆಗಳ ಹೂಳು ತೆರವು ಕಾರ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದಾಗ್ಯೂ, ಬೆಳ್ಳಂದೂರಿನಲ್ಲಿ ಕೊಳಚೆ ನೀರು ಹರಿಯುವ ನಾಲೆಯಲ್ಲಿ ಕಚ್ಚಾ ಮತ್ತು ಸಂಸ್ಕರಿಸದ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಕ್ಕೆ ತಂದರು.

LEAVE A REPLY

Please enter your comment!
Please enter your name here