ಶಸ್ತ್ರಾಸ್ತ್ರ ದಂಧೆಯಲ್ಲಿ ಮುಂಬೈ ಮೂಲದ ಲೆಕ್ಕಪರಿಶೋಧಕನನ್ನು ಸಿಲುಕಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಶುಕ್ರವಾರ ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಬೆಂಗಳೂರು: ಶಸ್ತ್ರಾಸ್ತ್ರ ದಂಧೆಯಲ್ಲಿ ಮುಂಬೈ ಮೂಲದ ಲೆಕ್ಕಪರಿಶೋಧಕನನ್ನು ಸಿಲುಕಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಶುಕ್ರವಾರ ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಬಂಧಿತರನ್ನು ರಾಹುಲ್, ಇರ್ಫಾನ್ ಮತ್ತು ಚಿಂತನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವೋ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳಿಂದ ಎರಡು ಪಿಸ್ತೂಲ್ಗಳು, ಒಂದು ಮ್ಯಾಗಜೀನ್ ಮತ್ತು ಐದು ಲೈವ್ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಲೆಕ್ಕಪರಿಶೋದಕನ ಮೇಲೆ ಆರೋಪ ಮಾಡಿದ್ದ.
ಈ ವೇಳೆ ಲೆಕ್ಕಪರಿಶೋಧಕನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಈ ಬಗ್ಗೆ ಅವರಿಗೆ ಅರಿವೇ ಇಲ್ಲದಿರುವುದು ಪೊಲೀಸರಿಗೆ ತಿಳಿದುಬಂದಿದೆ.
ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಇರ್ಫಾನ್ ಮುಂಬೈನ ಸಿಎ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಹಣ ದುರುಪಯೋಗದ ಆರೋಪದ ಮೇಲೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಲೆಕ್ಕಪರಿಶೋಧಕನನ್ನು ಶಸ್ತ್ರಾಸ್ತ್ರ ದಂಧೆಯಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.