Home Uncategorized ಸಂಸತ್ ಗಾಢ ಕತ್ತಲೆಯ ಕೊಠಡಿಯಾಗಿ ಮಾರ್ಪಟ್ಟಿದೆ; ಕೇಂದ್ರದ ವಿರುದ್ಧ ಡೆರೆಕ್ ಓ ಬ್ರಿಯಾನ್ ವಾಗ್ದಾಳಿ

ಸಂಸತ್ ಗಾಢ ಕತ್ತಲೆಯ ಕೊಠಡಿಯಾಗಿ ಮಾರ್ಪಟ್ಟಿದೆ; ಕೇಂದ್ರದ ವಿರುದ್ಧ ಡೆರೆಕ್ ಓ ಬ್ರಿಯಾನ್ ವಾಗ್ದಾಳಿ

19
0

ಹೊಸದಿಲ್ಲಿ: ಸಂಸತ್ ಭವನ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಸರಕಾರವು ಮೌನವನ್ನು ತಾಳಿದೆ ಎಂದು ಟಿಎಂಸಿ ನಾಯಕ ಟಿಎಂಸಿ ಪಕ್ಷದ ನಾಯಕ ಡೆರೆಕ್ ಓಬ್ರಿಯಾನ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನವು ಈಗ ‘‘ಗಾಢವಾದ ಕತ್ತಲಿನ ಕೊಠಡಿ’ಯಾಗಿ ಪರಿವರ್ತನೆಗೊಂಡಿದೆ ಎಂದು ಆಪಾದಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು 2001ರಲ್ಲಿ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದಾಗ, ಆಗಿನ ಪ್ರಧಾನಿ ಹಾಗೂ ಗೃಹ ಸಚಿವರು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು ಎಂದು ಹೇಳಿದ್ದಾರೆ.

‘‘2001ರ ಸಂಸತ್ ಭವನ ದಾಳಿ: ಮೂರು ದಿನಗಳ ಕಾಲ ಲೋಕಸಭೆಯಲ್ಲಿ ಪೂರ್ಣ ಪ್ರಮಾಣದ ಚರ್ಚೆ ನಡೆದಿತ್ತು. ಪ್ರಧಾನಿಯವರು ರಾಜ್ಯಸಭಾದಲ್ಲಿ ಹಾಗೂ ಗೃಹ ಸಚಿವರು ಲೋಕಸಭೆಯಲ್ಲಿ ಆ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು’’ .

2023ರ ಭದ್ರತಾ ಉಲ್ಲಂಘನೆ: ಸರಕಾರ ಮೌನ. ಸಂಸತ್ನಲ್ಲಿ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆ ಹಾಗೂ ಹೇಳಿಕೆಗೆ ಆಗ್ರಹಿಸಿದ 146 ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ ಗಾಢ ಕತ್ತಲೆಯ ಕೊಠಡಿಯಾಗಿ ಬದಲಾಗಿದೆ’’ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 23ರಂದು ಲೋಕಸಭೆಯ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ಯುವಕರು ಸದನಕ್ಕೆ ಜಿಗಿದು ಹೊಗೆಬಾಂಬ್ ಸಿಡಿಸಿದ ಘಟನೆಯು ಒಂದು ಗಂಂಭೀರವಾದ ಭದ್ರತಾ ಲೋಪವಾಗಿದ್ದು, ಅದರ ಬಗ್ಗೆ ಚರ್ಚೆಗೆ ಆಗ್ರಹಿಸಿ ಗದ್ದಲವೆಬ್ಬಿಸಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭಾದ ಒಟ್ಟು 146 ಸಂಸದರನ್ನು ಅಮಾನತುಗಳಿಸಲಾಗಿತ್ತು.

ರಾಜ್ಯಸಭಾ ಸದಸ್ಯರ ಪೈಕಿ ಎಲ್ಲರಿಗಿಂತ ಮೊದಲು ಅಮಾನತುಗೊಂಡ ಡೆರೆಕ್ ಓ ಬ್ರಿಯಾನ್ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಕೂಡಾ ಮಂಡಿಸಲಾಗಿತ್ತು. ಈ ವಿಷಯವನ್ನು ಸದನದ ಹಕ್ಕುಬಾಧ್ಯತಾಸಮಿತಿಯ ಪ್ರಸ್ತಾವನೆಗೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here