ಧಾರವಾಡ: ಇಡೀ ಕರ್ನಾಟಕದಲ್ಲಿ ಧಾರವಾಡದ ಹೆಸರು ಉತ್ತಮವಾಗಿರಬೇಕು.. ಎಲ್ಲ ಅಧಿಕಾರಿಗಳು, ಇಲಾಖೆಗಳಲ್ಲಿ ಸುಧಾರಣೆ ಕಾಣಬೇಕು.. ಇಡೀ ರಾಜ್ಯದಲ್ಲಿ ಧಾರವಾಡದ ಆಡಳಿತ ಚೆನ್ನಾಗಿದೆ ಎಂಬ ಹೆಸರು ಬರಬೇಕು.. ಹೀಗೆಲ್ಲ ಅಧಿಕಾರಿಗಳಿಗೆ ತಾಕೀತು ಮಾಡಿದ್ದು ಮತ್ತ್ಯಾರೂ ಅಲ್ಲ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್. ಹೌದು! ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಲಾಡ್ ಅವರು,
ಇಂದು ಅಕ್ಷರಶಃ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಲ್ಲದೇ ಧಾರವಾಡ ಹೀಗೇ ಇರಬೇಕು ಎಂದು ತಾಕೀತು ಮಾಡಿದ್ದಾರೆ. ಇದೀಗ ಸಚಿವರು ಹೇಳಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರಾ ಎಂಬುದೇ ಯಕ್ಷ ಪ್ರಶ್ನೆ. ಬರುವ ಮೂರು ತಿಂಗಳ ಅವಧಿಯಲ್ಲಿ ಧಾರವಾಡದ ಆಡಳಿತ ಸುಧಾರಣೆಯಾಗಬೇಕು. ಅಧಿಕಾರಿಗಳ ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು.
Black Tea benefits: ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಆಸ್ಪತ್ರೆ, ಹಾಸ್ಟೆಲ್, ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಬೇಕು. ಬರಗಾಲ ಇರುವುದರಿಂದ ರೈತರು ತೊಂದರೆಯಲ್ಲಿದ್ದಾರೆ. ವಿದ್ಯುತ್ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಜನರಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು. ಡ್ರಗ್ಸ್, ಗಾಂಜಾ ಮೀಟರ್ ಬಡ್ಡಿ ಇನ್ನು ಯಾವುದೇ ರೀತಿಯಲ್ಲಿ ಅಕ್ರಮ್ ಚಟುವಟಿಕೆಳು ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಮೂರು ತಿಂಗಳ ಅವಧಿಯಲ್ಲಿ ಆಡಳಿತ ಸುಧಾರಿಸಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸಚಿವ ಲಾಡ್ ಗಡುವು ನೀಡಿದರು.
The post ಸಚಿವರು ಹೇಳಿದಂತೆ ಕೇಳ್ತಾರಾ ಅಧಿಕಾರಿಗಳು.? ಆಡಳಿತ ಯಂತ್ರ ಸುಧಾರಣೆಗೆ ಮೂರು ತಿಂಗಳ ಗಡುವು appeared first on Ain Live News.