Home Uncategorized ’ಸಮಸ್ತ’ ಶತಮಾನೋತ್ಸವ ಉದ್ಘಾಟನಾ ಸಮ್ಮೇಳನ: ದ.ಕ.ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನೆ

’ಸಮಸ್ತ’ ಶತಮಾನೋತ್ಸವ ಉದ್ಘಾಟನಾ ಸಮ್ಮೇಳನ: ದ.ಕ.ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನೆ

13
0

ಪುತ್ತೂರು: ದೇಶದ ಪ್ರತಿಷ್ಠಿತ ಉಲಮಾ ಸಂಘಟನೆಯಾದ ‘ಸಮಸ್ತ’ದ ನೂರನೇ ವಾರ್ಷಿಕ ಐತಿಹಾಸಿಕ ಶತಮಾನೋ ತ್ಸವದ ಉದ್ಘಾಟನಾ ಸಮ್ಮೇನವು ಜನವರಿ 28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದ್ದು , ಅದರ ಪ್ರಚಾರಾರ್ಥ ದ.ಕ.ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚಿಸಲಾಯಿತು.

ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ’ಸಮಸ್ತ’ ವಿದ್ಯಾ ಭ್ಯಾಸ ಬೋರ್ಡ್ ಮ್ಯಾನೇಜರ್ ಮೋಹಿನ್ ಕುಟ್ಟಿ ಮಾಸ್ಟರ್ ಮಲಪ್ಪುರಂ ಅವರು ಉದ್ಘಾಟಿಸಿ, ಸಾತ್ವಿಕರಾದ ಉಲಮಾ, ಸಾದಾತ್‌ಗಳು ಆಧ್ಯಾತ್ಮಿಕತೆಯ ಭದ್ರ ಬುನಾದಿಯ ಮೇಲೆ ಕಟ್ಟಿದ ಶ್ರೇಷ್ಠ ಉಲಮಾ ಸಂಘಟನೆಯಾದ ’ಸಮಸ್ತ’ ಸಂಘಟನೆಯು ಧರ್ಮ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದರು.

’ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೇಂದ್ರೀಯ ಸ್ವಾಗತ ಸಮಿತಿಯ ಅಬ್ದ್ದುಲ್ಲತೀಫ್ ಹಾಜಿ ಬೆಂಗಳೂರು, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ದಾರಿಮೀಸ್ ರಾಜ್ಯ ಮುಖಂಡ ಕೆ.ಅರ್.ಹುಸೈನ್ ದಾರಿಮಿ ಮೊದಲಾದವರು ಬೆಂಗಳೂರು ಸಮ್ಮೇಳನದ ಬಗ್ಗೆ ಮಾಹಿತಿ ನೀಡಿ ಯಶಸ್ವಿಗೊಳಿಸಲು ಕರೆ ನೀಡಿದರು.

ಸಮಾರಂಭದಲ್ಲಿ ’ಸಮಸ್ತ’ ದ ವಿವಿಧ ಅಂಗ ಸಂಸ್ಥೆ ಗಳ ಮುಖಂಡರಾದ ಶರೀಫ್ ಫೈಝಿ ಕಡಬ, ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಎಲ್.ಟಿ.ಅಬ್ದುರ‌್ರಝಾಕ್ ಹಾಜಿ ಪುತ್ತೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ,ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಅಬ್ದುರ‌್ರಹ್ಮಾನ್ ದಾರಿಮಿ ತಬೂಕ್, ಕೆ..ಎಂ.ಎ.ಕೊಡುಂಗಾಯಿ, ಮುಫತ್ತಿಷ್ ಉಮರ್ ದಾರಿಮಿ, ಅಬ್ದುರ‌್ರಶೀದ್ ರಹ್ಮಾನಿ ಪರ್ಲಡ್ಕ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಬೂಬಕ್ಕರ್ ಮುಲಾರ್, ರಿಯಾಝ್ ರಹ್ಮಾನಿ ಕಿನ್ಯ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಬ್ಬಾಸ್ ದಾರಿಮಿ ಕೆಲಿಂಜ, ಉಸ್ಮಾನ್ ದಾರಿಮಿ ಕಲ್ಲಡ್ಕ, ಆದಂ ದಾರಿಮಿ ಅಜ್ಜಿಕಟ್ಟೆ, ಉಮರ್ ಪೈಝಿ ಸಾಲ್ಮರ, ಎಸ್.ಬಿ ಉಸ್ಮಾನ್ ದಾರಿಮಿ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಶರೀಫ್ ದಾರಿಮಿ ಈಶ್ವರ ಮಂಗಳ ಮೊದಲಾದವರು ಉಪಸ್ಥಿತರಿದ್ದರು.

’ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಸ್ವಾಗತಿಸಿ ಪ್ರಸ್ತಾವನೆ ಗೈದರು. ಸಾಲ್ಮರ ಉಮರ್ ದಾರಿಮಿ ಕೊನೆಗೆ ವಂದಿಸಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ದ.ಕ.ಜಿಲ್ಲಾ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ನಿರ್ದೇಶಕರಾಗಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ -ಬುಖಾರಿ ಕುನ್ನುಗೈ , ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಬೆಳ್ತಂಗಡಿ , ಸಯ್ಯಿದ್ ಅಹ್ಮದ್ ಪೂಕೋಯ ತಂಳ್ ಪುತ್ತೂರು ಚೇರ್‌ಮ್ಯಾನ್ ಆಗಿ ಬಂಬ್ರಾಣ ಉಸ್ತಾದ್,ಜನರಲ್ ಕನ್ವೀನರಾಗಿ ತೋಡಾರ್ ಉಸ್ತಾದ್ ಉಸ್ಮಾನುಲ್ ಫೈಝಿ ,ಕೋಶಾಧಿಕಾರಿಯಾಗಿ ಎಂ.ಎಚ್. ಮೊಯ್ದೀನ್ ಹಾಜಿ ಅಡ್ಡೂರು,ವೈಸ್ ಚೇರ್ಮನರಾಗಿ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಶರೀಫ್ ಫೈಝಿ ಕಡಬ, ರಫೀಕ್ ಹಾಜಿ ನೇರಳಕಟ್ಟೆ, ಶಂಸುದ್ದೀನ್ ದಾರಿಮಿ, ಉಮರ್ ದಾರಿಮಿ ಸಾಲ್ಮರ, ವರ್ಕಿಂಗ್ ಕನ್ವೀನರಾಗಿ ಅನೀಸ್ ಕೌಸರಿ ಕುಂಬ್ರ, ಸಹ ಕನ್ವೀನರಾಗಿ ಕೆ.ಎಲ್ ದಾರಿಮಿ,ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ರಶೀದ್ ರಹ್ಮಾನಿ, ಕೋರ್ಡಿನೆಟರಾಗಿ ಮುಫತ್ತಿಶ್ ಉಮರ್ ದಾರಿಮಿ ಹಾಗೂ ವಿವಿಧ ಉಪ ಸಮಿತಿ ಮುಖಂಡರುಗಳಾಗಿ ಕೆ.ಆರ್.ಹುಸೈನ್ ದಾರಿಮಿ, ತಬೂಕ್ ದಾರಿಮಿ, ಎಸ್.ಬಿ.ಮುಹಮ್ಮದ್ ದಾರಿಮಿ, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ಹಕೀಂ ಪರ್ತಿಪಾಡಿ. ಸೇರಿ 313 ಮಂದಿ ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here