ಮಂಗಳೂರು : ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಶತಮಾನೋತ್ಸವದ ಉದ್ಘಾಟನಾ ಸಮ್ಮೇಳನವು ಬೆಂಗಳೂರು ಅರಮನೆ ಮೈದಾನದಲ್ಲಿ ಜ.೨೮ರಂದು ನಡೆಯಲಿದ್ದು, ಅದರ ಪ್ರಚಾರಾರ್ಥವಾಗಿ ಬಾಂಬಿಲ ರೇಂಜ್ ಮಟ್ಟದ ಸ್ವಾಗತ ಸಮಿತಿ ರಚನೆಯು ಸಮಸ್ತ ಮುಫತ್ತಿಶ್ ಸಾಲ್ಮರ ಉಮರ್ ದಾರಿಮಿಯ ನೇತೃತ್ವದಲ್ಲಿ ಅಗ್ರಹಾರ ಮದ್ರಸದಲ್ಲಿ ನಡೆಯಿತು.
ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಆದಂ ಮುಸ್ಲಿಯಾರ್ ದೂಮಲಿಕೆ ಅಧ್ಯಕ್ಷತೆ ವಹಿಸಿದ್ದರು. ಅಗ್ರಹಾರ ಮಸೀದಿಯ ಖತೀಬ್ ಶಮೀರ್ ಫೈಝಿ ಸಭೆಯನ್ನು ಉದ್ಘಾಟಿಸಿದರು. ರೇಂಜ್ ಕಾರ್ಯದರ್ಶಿ ಪಿ.ಎಂ. ಯಹ್ಯಾ ಮದನಿ ಮರ್ಧಾಳ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಪಿ. ಉಮರ್ ಮುಸ್ಲಿಯಾರ್ ಪಾಂಡವರಕಲ್ಲು, ಉಪಾಧ್ಯಕ್ಷ ರಾಗಿ ಅಯ್ಯೂಬ್ ಪಳ್ಳಿಗುಡ್ಡೆ, ಹನೀಫ್ ದೂಮಲಿಕೆ, ಪ್ರಧಾನ ಸಂಚಾಲಕರಾಗಿ ಹಮೀದ್ ದಾರಿಮಿ ಅಗ್ರಹಾರ, ಸಹ ಸಂಚಾ ಲಕರಾಗಿ ಅಫ್ತಾಬ್ ಫೈಝಿ ಕೈಲಾರ್, ಕೋಶಾಧಿಕಾರಿಯಾಗಿ ಲತೀಫ್ ಹಾಜಿ ಝೆನಿತ್ ಬಾಂಬಿಲ ಆಯ್ಕೆ ಮಾಡಲಾಗಿದೆ.
ಸ್ವಾಗತ ಸಮಿತಿ ಸದಸ್ಯರನ್ನಾಗಿ ರೇಂಜ್ಗೊಳಪಟ್ಟ ಎಲ್ಲಾ ಮದ್ರಸದ ಅಧ್ಯಕ್ಷರು ಮತ್ತು ಸದರ್ ಮುಅಲ್ಲಿಮರನ್ನು ಆಯ್ಕೆ ಮಾಡಲಾಗಿದೆ.