Home Uncategorized ‘ಸಮಸ್ತ’ ಶತಮಾನೋತ್ಸವ ಉದ್ಘಾಟನಾ ಸಮ್ಮೇಳನ: ದ.ಕ.ಜಿಲ್ಲಾ ಸ್ವಾಗತ ಸಮಿತಿತ ಕಾರ್ಯಾಲಯ ಉದ್ಘಾಟನೆ

‘ಸಮಸ್ತ’ ಶತಮಾನೋತ್ಸವ ಉದ್ಘಾಟನಾ ಸಮ್ಮೇಳನ: ದ.ಕ.ಜಿಲ್ಲಾ ಸ್ವಾಗತ ಸಮಿತಿತ ಕಾರ್ಯಾಲಯ ಉದ್ಘಾಟನೆ

21
0

ಬಂಟ್ವಾಳ: ಉಲಮಾ ಸಂಘಟನೆಯಾದ ‘ಸಮಸ್ತ’ದ ಶತಮಾನೋತ್ಸವ ಉದ್ಘಾಟನಾ ಸಮ್ಮೇಳನದ ಪ್ರಚಾರಾರ್ಥ ದ.ಕ. ಜಿಲ್ಲಾ ಮಟ್ಟದ ಸ್ವಾಗತ ಸಮಿತಿಯ ಕಾರ್ಯಾಲಯವನ್ನು ಬಿ.ಸಿ.ರೋಡ್ ಸಮಸ್ತ ಭವನದಲ್ಲಿ ಶನಿವಾರ ಉದ್ಘಾಟಿಸಲಾಯಿತು.

‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ, ದ.ಕ.ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ, ಜಿಲ್ಲಾ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಉಸ್ಮಾನುಲ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ದಾರಿಮಿ ಒಕ್ಕೂಟದ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ, ದ.ಕ.ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ದಾರಿಮೀಸ್ ದ.ಕ.ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ, ಪುತ್ತೂರು ಜಂಇಯ್ಯತ್ತುಲ್ ಉಲಮಾದ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಎಸ್ಕೆಎಸ್ಸೆಸ್ಸೆಫ್ ಇಸ್ತಿಖಾಮದ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ರಾಜ್ಯ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಕಾರ್ಯಧ್ಯಕ್ಷ ಖಾಸಿಂ ದಾರಿಮಿ ನಂದಾವರ, ಇಸ್ಮಾಯಿಲ್ ಯಮಾನಿ, ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ, ಪ್ರಚಾರ ಸಮಿತಿಯ ಅಬ್ದುರ‌್ರಹ್ಮಾನ್ ದಾರಿಮಿ ತಬೂಕ್, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಒಮಾನ್, ಇಬ್ರಾಹಿಂ ದಾರಿಮಿ ಕಡಬ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಅಬೂಸ್ವಾಲಿಹ್ ಫೈಝಿ ಪಾಣೆಮಂಗಳೂರು, ಎಸ್.ಬಿ.ಉಸ್ಮಾನ್ ದಾರಿಮಿ, ಸಂಟಿಯಾರ್ ದಾರಿಮಿ, ಅಬ್ದುರ‌್ರಹ್ಮಾನ್ ದಾರಿಮಿ ದೇರಳಕಟ್ಟೆ, ಶಾಫಿ ನಂದಾವರ, ಅಬೂಬಕ್ಕರ್ ಸ್ವಾಗತ್ ದೇರಳಕಟ್ಟೆ, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಶರೀಫ್ ಮಿತ್ತಬೈಲು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here