ಹೊಸದಿಲ್ಲಿ : ಹಂಗಾಮಿ ಪ್ರಧಾನಿ ನರೇಂದ್ರ ಮೋದಿಯವರು ಎನ್ಡಿಎ ನೇತೃತ್ವದ ಸರಕಾರ ರಚನೆಗೆ ಹಕ್ಕು ಮಂಡಿಸಲು ರಾಷ್ಟ್ರಪತಿ ದ್ರೌಪರಿ ಮುರ್ಮು ಅವರನ್ನು ಭೇಟಿಯಾದರು. ಈ ಸಂದರ್ಭ ಅವರು ಎನ್ ಡಿ ಎ ಮಿತ್ರಪಕ್ಷಗಳ ಸಂದರ ಬೆಂಬ ಪತ್ರ ನೀಡಿದರು ಎಂದು ವರದಿಯಾಗಿದೆ.
ಸಾವರ್ತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ಸಿಗದ ಕಾರಣ, ಅತೀ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿರುವ ಎನ್ ಡಿ ಎ ಸರಕಾರ ರಚನೆ ನಡೆಸಲಿದೆ. ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಎನ್ ಡಿ ಎ ಮೈತ್ರಿಕೂಟದ ನಾಯಕನಾಗಿ ಆಯ್ಕೆಯಾದ ಬಳಿಕ, ರಾಷ್ಟ್ರಪತಿಯವರನ್ನು ಭೇಟಿ ಮಾಡಿದರು. ರವಿವಾರ ಜೂನ್̈ 9 ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.