ಶಿವಮೊಗ್ಗ: ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ ಆದರೆ ರಾಜ್ಯ ಸರ್ಕಾರಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯದಂಗಡಿ ತೆರೆಯುವುದೇ ಆದ್ಯತೆ ಆಗಿದೆ ಎಂದು ಶಾಸಕ ಬಿವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ” ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಹ ಹಲವಾರು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ಭಿನ್ನಾಭಿಪ್ರಾಯಗಳು ಪದೇ ಪದೇ ತಲೆದೋರುತ್ತಿವೆ.
ರಾಜ್ಯದ ಜನರೂ ಕೂಡ ಇದನ್ನ ಗಮನಿಸುತ್ತಿದ್ದಾರೆ. ಒಂದು ಕಡೆ ಭೀಕರ ಬರಗಾಲ ಇಡೀ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಮೊದಲು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ಮೀನಾಮೇಷ ಮಾಡಿ, ಕೊನೆಗೆ ಘೋಷಣೆ ಮಾಡಿದರು ” ಎಂದು ಹೇಳಿದರು. ಈ ಬೆನ್ನಲ್ಲೇ ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಬರದ ಮಧ್ಯೆಯೂ ಸರ್ಕಾರದ ಆದ್ಯತೆ ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್ ನೀಡುವ ಮೂಲಕ ಹಣ ಮಾಡುವುದು. ಹೆಂಡದ ಅಂಗಡಿಗಳಿಗೆ ಈ ಸಮಯದಲ್ಲೇ ಪರವಾನಗಿ ನೀಡುತ್ತಿರುವುದು ದುರಾದೃಷ್ಟಕರ ಸಂಗತಿ. ಉಪಮುಖ್ಯಮಂತ್ರಿ ಪರವಾನಗಿ ಕೊಡ್ತೀವಿ ಅಂತಾರೆ. ಸಿಎಂ ಕೊಡೋದಿಲ್ಲ ಅಂತಾರೆ. ಇದರಲ್ಲೂ ಸಹ ದ್ವಂದ್ವ ನಿಲುವಿದೆ. ನಿಜಕ್ಕೂ ಬಡವರ ಬಗ್ಗೆ ಕಾಳಜಿ ಇರದ ಸರ್ಕಾರ ಹೇಗೆ ನಡೆದುಕೊಳ್ಳಬೇಕೋ ಹಾಗೆ ಈ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.
The post ಸರ್ಕಾರಕ್ಕೆ ಗ್ರಾ. ಪಂ.ಗಳಲ್ಲಿ ಮದ್ಯದಂಗಡಿ ತೆರೆಯುವುದೇ ಆದ್ಯತೆ ಆಗಿದೆ: ಬಿವೈ ವಿಜಯೇಂದ್ರ appeared first on Ain Live News.