Home ಕರ್ನಾಟಕ ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ತಡೆ: ಪ್ರಕರಣ ದಾಖಲು

ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ತಡೆ: ಪ್ರಕರಣ ದಾಖಲು

30
0

ಹಿರಿಯಡ್ಕ: ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತಡೆಗೋಡೆ ನಿರ್ಮಿಸಿ ರಸ್ತೆ ನಾಶ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತಡೆಯೊಡ್ಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕೆಹಳ್ಳಿಯ ಅನಂತಪದ್ಮನಾಭ ಹಾಗೂ ಇತರರ ಮನೆಗೆ ಬರುವ ಹಾಗೂ ಕೃಷಿ ಚಟುವಟಿಕೆ ಗಾಗಿ ಅನಾದಿಕಾಲದಿಂದಲೂ ಉಪಯೋಗಿಸುತ್ತಿದ್ದ ಕುಕ್ಕೆಹಳ್ಳಿ-ಆತ್ರಾಡಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕುಕ್ಕೆಹಳ್ಳಿ ಗ್ರಾಮದ ಸಾರ್ವಜನಿಕರ ರಸ್ತೆಯನ್ನು ದೇವರಾಜ್ ಹಾಗೂ ಸಾವಿತ್ರಿ ಎಂಬವರು ಇತರರ ಸಹಕಾರದಿಂದ ಮಾ.9ರಂದು ತಡೆಗೋಡೆ ನಿರ್ಮಿಸಿ ರಸ್ತೆ ನಾಶ ಮಾಡಿ ಸುಗಮ ಸಂಚಾರಕ್ಕೆ ಕಾನೂನು ಬಾಹಿರವಾಗಿ ತಡೆಯೊಡ್ಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here