ವಿಜಯನಗರ;- ಸಿಎಂ ಭಾಗಿಯಾಗಬೇಕಾಗಿದ್ದ ಕಾರ್ಯಕ್ರಮ ರದ್ದಾಗಿದೆ. ಜಿಲ್ಲೆಯ ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇಗುಲದ ಬಳಿ ಆಯೋಜಿಸಿದ್ದ ಚಾರ್ಟೆಡ್ ಅಕೌಂಟಂಟ್ಗಳ ಪ್ರಾದೇಶಿಕ ಸಮ್ಮೇಳನವು ಮಾಜಿ ಸಚಿವರ ರಾಜಕೀಯ ಪ್ರತಿಷ್ಠೆಗೆ ರದ್ದಾಗಿದೆ.
ಈ ಸಮ್ಮೇಳನವನ್ನು ಅಕ್ಟೋಬರ್ 12 ರಂದು ಅದ್ಧೂರಿಯಾಗಿ ನಡೆಸಲು ಭರದ ಸಿದ್ದತೆಗಳು ನಡೆದಿದ್ದವು, ಮಾಜಿ ಸಚಿವ ಆನಂದ್ ಸಿಂಗ್ಗೆ ಸೇರಿದ ಸ್ಥಳದಲ್ಲಿ ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಾಣ ಕಾರ್ಯವೂ ಮುಂದುವರೆದಿತ್ತು. ಆದರೆ ಪರವಾನಿಗೆ ಪಡೆದಿಲ್ಲ ಎಂಬ ಕಾರಣಕ್ಕೆ ಆನಂದ್ ಸಿಂಗ್ ಅವರಿಂದ ಅಡ್ಡಿಪಡಿಸಲಾಗಿದೆ.
ಜರ್ಮನ್ ಟೆಂಟ್ ಸೇರಿದಂತೆ ಅದ್ದೂರಿ ಟೆಂಟ್ ಹಾಕಲಾಗುತ್ತಿತ್ತು. ಪರವಾನಿಗೆ ಪಡೆಯದೇ, ಆನಂದ್ ಸಿಂಗ್ ಮನೆ ಪಕ್ಕದಲ್ಲಿರುವ ವಿಶಾಲವಾದ ಜಾಗದಲ್ಲಿ ಜರ್ಮನ್ ಟೆಂಟ್ ಅನ್ನು ಆಯೋಜಕರು ಹಾಕಿದ್ರಾ? ಪರವಾನಿಗೆ ಪಡೆಯಲಿಲ್ಲ ಎಂಬ ಕಾರಣಕ್ಕೆ ಪ್ರತಿಷ್ಠೆಗೆ ಬಿದ್ದು ಮಾಜಿ ಸಚಿವರು ಕಾರ್ಯಕ್ರಮ ನಿಲ್ಲಿಸಲು ಮುಂದಾದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.
The post ಸಿಎಂ ಭಾಗಿಯಾಗಬೇಕಿದ್ದ ಕಾರ್ಯಕ್ರಮ ರದ್ದು, ಮಾಜಿ ಸಚಿವರ ರಾಜಕೀಯ ಪ್ರತಿಷ್ಠೆ ಕಾರಣವಾ!? appeared first on Ain Live News.