ಮಂಗಳೂರು: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನಾಚರಣೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಕೆಪಿಟಿ ಬಳಿಯ ಕಚೇರಿಯಲ್ಲಿ ಗುರುವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಶೋತ್ತಮ ಚಿತ್ರಾಪುರ ಧ್ವಜಾರೋಹನ ನೆರವೇರಿಸಿದರು. ಮಾಜಿ ಮಹಾಪೌರರಾದ ಕವಿತಾ ಸನಿಲ್, ಮಹಾಬಲ ಮಾರ್ಲ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಶುಭೋದಯ ಆಳ್ವಾ, ಕಾಂಗ್ರೆಸ್ ಪಕ್ಷದ ವಕ್ತಾರ ರಾದ ಎಂ.ಜಿ.ಹೆಗ್ಡೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು.
ಸೇವಾದಳದ ಮುಖಂಡರಾದ ವಿಶ್ವನಾಥ, ಶಶಿಕಲಾ ಪದ್ಮನಾಭ, ಶಮೀರ್ ಕುಂಡ್ಕ, ಝುಬೇರ್ ಉಳ್ಳಾಲ, ನಾಗೇಶ್ ಶೆಟ್ಟಿ, ಶ್ರೀನಿವಾಸ ಸಾಲಿಯಾನ್, ಪಕ್ಷದ ಮುಖಂಡರಾದ ನೀರಜ್ ಪಾಲ್, ಪದ್ಮನಾಭ ಅಮೀನ್, ರೆಹಮಾನ್ ಖಾನ್ ಕುಂಜತ್ತ ಬೈಲ್, ಸ್ಟ್ಯಾನಿ ಮಿನೇಜಸ್, ಸತ್ತಾರ್ ಸುರತ್ಕಲ್, ಮಲ್ಲಿಕಾರ್ಜುನ, ಪ್ರಮೀಳಾ ಈಶ್ವರ್, ಅನಿತಾ, ನಾಗವೇಣಿ, ಸಾರಿಕಾ ಪೂಜಾರಿ, ಪದ್ಮಾವತಿ, ಕುಮಾರ್ ಮೆಂಡನ್, ನಿತ್ಯಾನಂದ, ಗಣೇಶ ಕೊಪ್ಪಳಕಾಡು, ಮಮತಾ, ಮರ್ವಿನ್, ಡೋಲ್ಸಿ, ಉಮೇಶ್ ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಸೇವಾದಳದ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.