Home Uncategorized ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು, ಒಳ್ಳೆಯ ಕಾಲ ಬಂದೇ ಬರುತ್ತದೆ: ಎನ್​ ರವಿಕುಮಾರ್​

ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು, ಒಳ್ಳೆಯ ಕಾಲ ಬಂದೇ ಬರುತ್ತದೆ: ಎನ್​ ರವಿಕುಮಾರ್​

41
0

ಬೆಂಗಳೂರು: ಬಿಜೆಪಿಗೆ ಬಂದು ಸೋತೆ ಎಂಬ ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಕಾಲ ಇರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಸೋಮಣ್ಣ ಪರ ಬ್ಯಾಟ್‌ ಬೀಸಿದ್ದಾರೆ.

GTD Vs DKS: ಎರಡೂವರೆ ವರ್ಷದ ಬಳಿಕ ಸಿಎಂ ಅಂತಾ ಹೇಳುವ ತಾಕತ್ತು ಇಲ್ವಾ?: ಜಿಟಿ ದೇವೇಗೌಡ ವ್ಯಂಗ್ಯ

 ನಗರದಲ್ಲಿ ಮಾತನಾಡಿದ ಅವರು, ವಾಜಪೇಯಿ, ಇಂದಿರಾಗಾಂಧಿ, ಯಡಿಯೂರಪ್ಪನವರೂ ಕೂಡಾ ಸೋತಿದ್ದರು. ಪ್ರತಿಯೊಬ್ಬರಿಗೂ ಒಂದು ಬಾರಿ ಸೋಲು, ಒಂದು ಬಾರಿ ಗೆಲುವಾಗಬಹುದು. ಬಿಜೆಪಿಗೆ ಬಂದಿದ್ದರಿಂದ ಸೋತೆ ಅಂತ ಸೋಮಣ್ಣ ಹೇಳಿರುವುದು ಅವರ ವೈಯಕ್ತಿಕ. ಇದನ್ನು ಪ್ರಮುಖರ ಜೊತೆ ಕುಳಿತು ಹಿರಿಯರು ಬಗೆಹರಿಸುತ್ತಾರೆ ಎಂದು ಹೇಳಿದರು.

ಹಾಗೆ ದಯನೀಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಬಗ್ಗೆ ಸೋಮಣ್ಣ ಹೇಳಿದ್ದಾರೆ. ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು. ಸೋಮಣ್ಣ ಅವರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.

The post ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು, ಒಳ್ಳೆಯ ಕಾಲ ಬಂದೇ ಬರುತ್ತದೆ: ಎನ್​ ರವಿಕುಮಾರ್​ appeared first on Ain Live News.

LEAVE A REPLY

Please enter your comment!
Please enter your name here