Home Uncategorized ಹೈಕಮಾಂಡ್ ಬುಲಾವ್, ದೆಹಲಿಗೆ ಹೊರಟ ಸಿದ್ದರಾಮಯ್ಯ: ಅಭಿಮಾನಿಗಳಿಂದ ಮುಂದಿನ ಸಿಎಂ ಘೋಷಣೆ

ಹೈಕಮಾಂಡ್ ಬುಲಾವ್, ದೆಹಲಿಗೆ ಹೊರಟ ಸಿದ್ದರಾಮಯ್ಯ: ಅಭಿಮಾನಿಗಳಿಂದ ಮುಂದಿನ ಸಿಎಂ ಘೋಷಣೆ

41
0

ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಗ್ಗಂಟಾಗಿರುವ ಹೊತ್ತಿನಲ್ಲಿ ಹೈಕಮಾಂಡ್ ನಿಂದ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೊರಟಿದ್ದಾರೆ. ಬೆಂಗಳೂರು: ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಗ್ಗಂಟಾಗಿರುವ ಹೊತ್ತಿನಲ್ಲಿ ಹೈಕಮಾಂಡ್ ನಿಂದ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೊರಟಿದ್ದಾರೆ.

ದೆಹಲಿಗೆ ಕರೆದಿರುವ ಹೈಕಮಾಂಡ್ ಇಂದು ಸಂಜೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ನಿನ್ನೆ ನಡೆದಿರುವ ಸಿಎಲ್ ಪಿ ಸಭೆಯಲ್ಲಿ ಒಂದು ಸುತ್ತಿನ ನಿರ್ಣಯ ತೆಗೆದುಕೊಂಡು ವರದಿಯನ್ನು ಹೊತ್ತು ವೀಕ್ಷಕರು ದೆಹಲಿಗೆ ತಲುಪಿದ್ದಾರೆ. 

ಇದನ್ನೂ ಓದಿ: ಸಿಎಂ ಹುದ್ದೆ ರೇಸ್ ನಲ್ಲಿ ಸಿದ್ದು v/s ಡಿಕೆಶಿ: ಇಬ್ಬರು ನಾಯಕರ ಪ್ಲಸ್-ಮೈನಸ್ ಗಳೇನು?

ಮುಂದಿನ ಸಿಎಂ ಘೋಷಣೆ: ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಎದುರು ಸೇರಿದ ಅಪಾರ ಸಂಖ್ಯೆಯ ಅವರ ಅಭಿಮಾನಿಗಳು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಾ ಅವರಿಗೆ ಶುಭ ಕೋರುತ್ತಿರುವುದು ಕಂಡುಬಂತು. 

Supporters of CLP leader ⁦@siddaramaiah⁩ shout slogans saying future CM of Karnataka and wishes him ⁦@XpressBengaluru⁩ ⁦@NewIndianXpress⁩ ⁦@Cloudnirad⁩ ⁦@ramupatil_TNIE⁩ ⁦@AshwiniMS_TNIE⁩ ⁦@vinodkumart5⁩ ⁦@gadekal2020pic.twitter.com/y4whmP0tLN
— Shashidhar Byrappa (@ShashidharNIE) May 15, 2023

ಸಿದ್ದರಾಮಯ್ಯ ತಮ್ಮ ಮನೆಯಿಂದ ದೆಹಲಿಗೆ ಹೊರಡುವ ವೇಳೆ ಕಾರ್ಯಕರ್ತರು ಘೋಷಣೆ ಕೂಗಿದರು. ಅಭಿಮಾನಿಗಳ ತಳ್ಳಾಟ, ನೂಕಾಟದಿಂದ ಸಿದ್ದರಾಮಯ್ಯ ಅವರ ಕೈಗೆ ಮತ್ತೆ ನೋವಾಗಿದೆ. ಆಗ ಬೆಂಬಲಿಗರ ಮೇಲೆ ಸಿದ್ದರಾಮಯ್ಯ ಸಿಟ್ಟಾದರು.

@XpressBengaluru ಸಿದ್ದರಾಮಯ್ಯ ತಮ್ಮ ಮನೆಯಿಂದ ದೆಹಲಿಗೆ ಹೊರಡುವ ವೇಳೆ ಕಾರ್ಯಕರ್ತರು ಘೋಷಣೆ ಕೂಗಿದರು. ಅಭಿಮಾನಿಗಳ ತಳ್ಳಾಟ, ನೂಕಾಟದಿಂದ ಸಿದ್ದರಾಮಯ್ಯ ಅವರ ಕೈಗೆ ಮತ್ತೆ ನೋವಾಗಿದೆ. ಆಗ ಬೆಂಬಲಿಗರ ಮೇಲೆ ಸಿದ್ದರಾಮಯ್ಯ ಸಿಟ್ಟಾದರು. pic.twitter.com/B76QnMYu6D
— kannadaprabha (@KannadaPrabha) May 15, 2023

LEAVE A REPLY

Please enter your comment!
Please enter your name here