Home Uncategorized 5 ಶಾಸಕರಿಗೆ 50 ಕೋಟಿ ಅಮಿಷ ತೋರುತ್ತಿರುವ ಬಿಜೆಪಿ – ಶಾಸಕ ಗಣಿಗ ರವಿ ಆರೋಪ

5 ಶಾಸಕರಿಗೆ 50 ಕೋಟಿ ಅಮಿಷ ತೋರುತ್ತಿರುವ ಬಿಜೆಪಿ – ಶಾಸಕ ಗಣಿಗ ರವಿ ಆರೋಪ

24
0

ಬೆಂಗಳೂರು;-ಬಿಜೆಪಿ ಸೇರಲು 5 ಶಾಸಕರಿಗೆ 50 ಕೋಟಿ ರು. ಆಮಿಷ ತೋರಲಾಗಿದೆ ಎಂದು ಶಾಸಕ ಗಣಿಗ ರವಿ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಆಪರೇಷನ್‌ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್‌ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್‌ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದರು.

ಈ ತಂಡದಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಎನ್‌.ಆರ್‌.ಸಂತೋಷ್‌ ಜೊತೆಗೆ ಬೆಳಗಾವಿಯ ಓರ್ವ ಮಾಜಿ ಸಚಿವ, ಮೈಸೂರು ಭಾಗದ ಓರ್ವ ಮಾಜಿ ವಿಧಾನ ಪರಿಷತ್‌ ಸದಸ್ಯ ಸೇರಿದಂತೆ ಬಿಜೆಪಿಯ ಇನ್ನಿತರೆ ನಾಯಕರುಗಳಿದ್ದಾರೆ. ಆ ತಂಡದವರು ನಮ್ಮ ಶಾಸಕರನ್ನು ಸಂಪರ್ಕಿಸಿದ ಆಡಿಯೋ, ವಿಡಿಯೋಗಳೂ ನಮ್ಮ ಬಳಿ ಇವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಪಕ್ಷ ತೊರೆದರೆ ₹50 ಕೋಟಿ ಕೊಡುವ, ವಿಶೇಷ ವಿಮಾನ ಮಾಡಿ ಕರೆದೊಯ್ದು ಅಮಿತ್‌ ಷಾ ಭೇಟಿ ಮಾಡಿಸುವುದು, ಮಂತ್ರಿ ಮಾಡುವ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆದಿದೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಯಾರು ಕಾರಣವಾಗಿದ್ದರೋ ಅದೇ ತಂಡ ಮತ್ತೆ ಈಗ ಸಕ್ರಿಯವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಐವರು ಶಾಸಕರನ್ನು ಆ ತಂಡದವರು ಸಂಪರ್ಕಿಸಿದ ಆಡಿಯೋ, ವಿಡಿಯೋ ನಮ್ಮ‌ಲ್ಲಿದೆ ಎಂದರು.

ನಾಲ್ಕೂ ದಿಕ್ಕುಗಳಿಂದ ಆಪರೇಷನ್ ಶುರುವಾಗಿದೆ. ಇಂಥ ತಂಡದ ಆಮಿಷಕ್ಕೆ ನಮ್ಮವರು ಬಲಿಯಾಗಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಅಂಥ ಗ್ಯಾಂಗ್‌ನಲ್ಲಿ ಮಾಜಿ‌ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪಿಎ ಆಗಿದ್ದ ಎನ್‌.ಆರ್‌.ಸಂತೋಷ್ ಕೂಡ ಇದ್ದಾರೆ. ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ನಮ್ಮ ಶಾಸಕ‌ ಮಿತ್ರರೊಬ್ಬರನ್ನು ಸಂತೋಷ್‌ ಭೇಟಿಯಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಯಾರೆಲ್ಲಾ ಓಡಾಡುತ್ತಿದ್ದಾರೆ ಎಂಬ ದಾಖಲೆಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

The post 5 ಶಾಸಕರಿಗೆ 50 ಕೋಟಿ ಅಮಿಷ ತೋರುತ್ತಿರುವ ಬಿಜೆಪಿ – ಶಾಸಕ ಗಣಿಗ ರವಿ ಆರೋಪ appeared first on Ain Live News.

LEAVE A REPLY

Please enter your comment!
Please enter your name here