ಹೊಸಪೇಟೆ (ವಿಜಯನಗರ ): ನಗರದ ಅಮರಾವತಿಯ,ಗೀತಾ ಟೈಲರ್ ಹಿಂಭಾಗದಲ್ಲಿರುವ ಶರಣಂ ಆಸ್ಪತ್ರೆ ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ತಾತ್ಕಾಲಿಕವಾಗಿ ಮುಚ್ಚಲು ತಾಲೂಕು ಅರೋಗ್ಯಧಿಕಾರಿ ಆದೇಶ ಹೋರಡಸಿದ್ದಾರೆ.
9ವರ್ಷದ ಬಾಲಕನ ಸಾವಿಗೆ ಸಂಬಂಧಿಸಿ ನಗರದ ಶರಣಂ ಆಸ್ಪತ್ರೆ ಕೆಪಿಎಂಇ ಕಾಯ್ದೆ ಉಲ್ಲಂಘಿಸಿದೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಅವರು ಆದೇಶ ನೀಡಿದ್ದಾರೆ.
ಯಾರಾದರೂ ಒಳ ರೋಗಿಗಳು ಶರಣಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಲ್ಲಿ ತಕ್ಷಣವೇ ಅವರನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪತ್ರದ ಸೂಚನೆಯಂತೆ ಶರಣಂ ಆಸ್ಪತ್ರೆಯ ವೈದ್ಯರಾದ ಡಾ. ವಿನಯರಾಘವೇಂದ್ರ ಇವರಿಗೆ ತಾತ್ಕಾಲಿಕವಾಗಿ ಆಸ್ಪತ್ರೆ ಮುಚ್ಚಲು ನೋಟಿಸ್ ನೀಡಲಾಗಿದೆ. ಅವರು 24 ಗಂಟೆಗಳ ಕಾಲಾವಧಿ ಕೇಳಿದ್ದಾರೆ. ನಂತರ ನಿಯಮಗಳ ಪ್ರಕಾರ ಮುಚ್ಚಲಾಗುವುದು ಎಂದು ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಾಧಿಕಾರಿ ಡಾ. ಶಂಕರ್ ನಾಯಕ್ ತಿಳಿಸಿದ್ದಾರೆ.