Home Uncategorized Arrest; ಸಿದ್ದರಾಮಯ್ಯರ ಮೈಸೂರಿನ ಮನೆ ಮೇಲೆ ಕಲ್ಲೆಸೆದಿದ್ದ ಆರೋಪಿ ಅರೆಸ್ಟ್

Arrest; ಸಿದ್ದರಾಮಯ್ಯರ ಮೈಸೂರಿನ ಮನೆ ಮೇಲೆ ಕಲ್ಲೆಸೆದಿದ್ದ ಆರೋಪಿ ಅರೆಸ್ಟ್

20
0

ಮೈಸೂರು;- ಸಿಎಂ ಸಿದ್ದರಾಮಯ್ಯರ ಮೈಸೂರಿನ ಮನೆ ಮೇಲೆ ಕಲ್ಲೆಸೆದಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸಕ್ಕೆ ಮೈಸೂರಿನ ಸತ್ಯಮೂರ್ತಿ ಎಂಬಾತ ಕಲ್ಲೆಸೆದಿದ್ದ. ಈತನನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಸತ್ಯಮೂರ್ತಿ ಎವಿಎಂ ಯಂತ್ರ ಒಡೆದು ಹಾಕಿದ್ದ. ಅಲ್ಲದೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂಂದ್ರ ಅವರ ಫೋಟೊಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ್ದ. ಈತ ಮಾನಸಿಕ ಅಸ್ವಸ್ಥ ಎಂದು ಈ ಹಿಂದೆ ಹೇಳಲಾಗಿತ್ತು.

The post Arrest; ಸಿದ್ದರಾಮಯ್ಯರ ಮೈಸೂರಿನ ಮನೆ ಮೇಲೆ ಕಲ್ಲೆಸೆದಿದ್ದ ಆರೋಪಿ ಅರೆಸ್ಟ್ appeared first on Ain Live News.

LEAVE A REPLY

Please enter your comment!
Please enter your name here