ಬೆಂಗಳೂರು : ಆನ್ಲೈನ್ ಜಾಬ್, ವಿದೇಶಿ ಉಡುಗೊರೆ, ಬಿಟ್ಕಾಯಿನ್ ಹೂಡಿಕೆಯಲ್ಲಿ ದುಪ್ಪಟ್ಟು ಲಾಭ ನೆಪದಲ್ಲಿ ಸೈಬರ್ ವಂಚಕರು ರಾಜಧಾನಿಯಲ್ಲಿ ಕಳೆದ ಒಂಭತ್ತು ತಿಂಗಳಲ್ಲಿ 470 ಕೋಟಿ ರೂ. ಲಪಟಾಯಿಸಿದ್ದಾರೆ. ಆದರೆ, ‘ಗೋಲ್ಡನ್ ಅವರ್’ ಅವಕಾಶವೂ ಸೇರಿ ಕೇಸ್ಗಳ ಕ್ಷಿಪ್ರ ತನಿಖೆ ನಡೆಸಿರುವ ನಗರ ಪೊಲೀಸರು 201 ಕೋಟಿ ರೂ. ವಂಚಕರ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ವಂಚನೆ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಿರುವ ಮೊತ್ತದಲ್ಲಿ 28 ಕೋಟಿ ರೂ. ಜಪ್ತಿ ಮಾಡಲಾಗಿದೆ. ಕೋರ್ಟ್ ಪ್ರಕ್ರಿಯೆಗಳ ಮೂಲಕ ಈಗಾಗಲೇ ದೂರುದಾರರಿಗೆ 27 ಕೋಟಿ ರೂ. ಹಿಂದಿರುಗಿಸಲಾಗಿದೆ. ಉಳಿದ ಮೊತ್ತವನ್ನು ಕೋರ್ಟ್ ಪ್ರಕ್ರಿಯೆ ಅನುಸರಿಸಿ ದೂರುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
‘ಸೈಬರ್ ವಂಚನೆ ಪ್ರಕರಣಗಳು ತ್ವರಿತವಾಗಿ ಪೂರ್ಣಗೊಳ್ಳುತ್ತಿಲ್ಲಎಂಬ ಆಕ್ಷೇಪಣೆಗಳಿವೆ. ಹೀಗಾಗಿ, ಕೇಸ್ಗಳ ತನಿಖೆಯನ್ನು ನಿಗದಿತ ಅವಧಿ 60 ದಿನ ಇಲ್ಲವೇ 90 ದಿನಗಳಲ್ಲಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ತನಿಖೆ ವಿಳಂಬವಾದರೆ ತನಿಖಾಧಿಕಾರಿ ಸಕಾರಣಗಳ ಜತೆಗೆ ಹಿರಿಯ ಅಧಿಕಾರಿಗಳ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಸೈಬರ್ ಕ್ರೈಂ ಕೇಸ್ಗಳ ಕ್ಷಿಪ್ರ ತನಿಖೆ ಸಲುವಾಗಿ ಪ್ರತಿ ಠಾಣೆಯ ಸಿಬ್ಬಂದಿಗೆ ತರಬೇತಿ ಕೊಡಿಸಲಾಗುವುದು’ ಎಂದು ಅವರು ಹೇಳಿದರು.
The post Bangalore Crime: ಸೈಬರ್ ಕ್ರೈಂ ಮೂಲಕ 9 ತಿಂಗಳಲ್ಲಿ 470 ಕೋಟಿ ರೂ. ವಂಚನೆ..! appeared first on Ain Live News.