Home Uncategorized BBMPಯ ಘನ ತ್ಯಾಜ್ಯ ವಿಲೇವಾರಿ, ನಿವೇಶನಗಳ ಕುರಿತು DCM ನೇತೃತ್ವದಲ್ಲಿ ಮಹತ್ವದ ಸಭೆ!

BBMPಯ ಘನ ತ್ಯಾಜ್ಯ ವಿಲೇವಾರಿ, ನಿವೇಶನಗಳ ಕುರಿತು DCM ನೇತೃತ್ವದಲ್ಲಿ ಮಹತ್ವದ ಸಭೆ!

17
0

ಬೆಂಗಳೂರು: ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಜಮೀನು ಗುರುತಿಸುವ, ಕೆಂಪೇಗೌಡ ಬಡಾವಣೆ, ಬನಶಂಕರಿ ಬಡಾವಣೆ ಮತ್ತು ಇತರೆ ಬಡಾವಣೆಗಳಲ್ಲಿ ಅಭಿವೃದ್ಧಿ ಪಡಿಸಿರುವ ನಿವೇಶನಗಳ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ವಿಧಾನ ಸೌಧದ ಕೊಠಡಿ ಸಂಖ್ಯೆ 334ರಲ್ಲಿ  ಅರಣ್ಯ ಇಲಾಖೆಯ ತಕರಾರು ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ ವಿವಿಧ ವಲಯಗಳಿಗೆ ನಿಗದಿಯಾಗಿರುವ ಬಫರ್ ಅಂತರವನ್ನು ಕಡಿಮೆ ಅಥವಾ ಪುನರ್ ನಿಗದಿ ಮಾಡುವ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು.

ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಲೋಕಸಭಾ ಸಂಸದರಾದ ಸದಾನಂದ ಗೌಡ, ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ರವಿ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯರಾಂ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

The post BBMPಯ ಘನ ತ್ಯಾಜ್ಯ ವಿಲೇವಾರಿ, ನಿವೇಶನಗಳ ಕುರಿತು DCM ನೇತೃತ್ವದಲ್ಲಿ ಮಹತ್ವದ ಸಭೆ! appeared first on Ain Live News.

LEAVE A REPLY

Please enter your comment!
Please enter your name here