Home Uncategorized Bengaluru; ಅತ್ತಿಬೆಲೆ ಪಟಾಕಿ ದುರಂತ ಕೇಸ್, ಇದು ಅತ್ಯಂತ ದುರಾದೃಷ್ಟ ಸಂಗತಿ- ಬಿ.ಎಸ್.ಪಾಟೀಲ್

Bengaluru; ಅತ್ತಿಬೆಲೆ ಪಟಾಕಿ ದುರಂತ ಕೇಸ್, ಇದು ಅತ್ಯಂತ ದುರಾದೃಷ್ಟ ಸಂಗತಿ- ಬಿ.ಎಸ್.ಪಾಟೀಲ್

30
0

ಆನೇಕಲ್; ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಕೊಂಡಿದ್ದಾರೆ.

ಪರಿಶೀಲನೆ ಬಳಿಕ ಮಾತನಾಡಿದ ಲೋಕಾಯುಕ್ತ ಮುಖ್ಯ ನ್ಯಾಯಾಮೂರ್ತಿ ಬಿ.ಎಸ್.ಪಾಟೀಲ್, ಇಂತಹ ದುರಾದೃಷ್ಟಕರವಾದ ಘಟನೆ ನಡೆದು ಹೋಗಿದೆ. ಕಾನೂನು ಪ್ರಕಾರವಾಗಿ ಇವರು ನಡೆದುಕೊಂಡಿದ್ರೆ ಈ ರೀತಿ ಆಗುತ್ತಿರುಲಿಲ್ಲ. ಇಲ್ಲಿ ಬಾರಿ ಪ್ರಮಾಣದ ಪಾಟಾಕಿಯನ್ನ ಶೇಕರಣೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಇವರಿಗೆ ಪಟಾಕಿ ಮಾರಾಟ ಮಾಡೋಕೆ ಮಾತ್ರ ಅನುಮತಿ ಇತ್ತು. ಅದ್ರೆ ಗೋಡೋನ್ ಮಾಡಿಕೊಂಡು ಹೆಚ್ಚಿನ ಪ್ರಮಾಣದ ಪಟಾಕಿ ಶೇಖರಣೆ ಮಾಡಿದ್ದಾರೆ.

ಇದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ. ಇದರಿಂದಾಗಿ ಹದಿನಾಲ್ಕು ಅಮಾಯಕ ಜೀವಗಳು ಹೋಗಿವೆ. ಜನಸಾಮಾನ್ಯರು ,ವರ್ತಕರು ಹಬ್ಬದ ಸೀಜನ್ ಗಳಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಕ್ಕಪಕ್ಕದ ಅಂಗಡಿಯವರನ್ನ ಕರೆದು ಕೇಳಿದ್ರೆ ಸರಿಯಾದ ಉತ್ತರ ನೀಡುತ್ತಿಲ್ಲ. ಸಾರ್ವಜನಿಕರು ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕರಿಸಬೇಕು. ಸರ್ಕಾರ ಸಿಐಡಿಗೆ ಆದೇಶಿಸಿ ಕ್ರಮ ಕೈಗೊಂಡಿದೆ ಎಂದರು.

ಈ ವಿಚಾರವನ್ನ ಸಿರೀಯಸ್ ಆಗಿ ಪತಿಗಣಿಸಿದ್ದೇವೆ. ಇದರಲ್ಲಿ ಅಧಿಕಾರಿಗಳ ಲೋಪ ಇರುವುದು ಎದ್ದು ಕಾಣುತ್ತಿದೆ. ಇಲ್ಲಿಗೆ ಬಂದಾಗ ಅಧಿಕಾರಿಗಳಿಂದ ಹಲವು ಮಾಹಿತಿಯನ್ನ ಪಡೆದುಕೊಂಡಿದ್ದೇವೆ. ಅಧಿಕಾರಿಗಳು ನೀಡಿರುವ ಮಾಹಿತಿ ನಂಬುಲು ಸಾಧ್ಯವಾ ಇಲ್ವಾ ಅನ್ನೋ ಬಗ್ಗೆ ಈಗಲೇ ಹೇಳೋಕೆ ಆಗಲ್ಲ. ಈ ಒಂದು ಘಟನೆ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಇಂತಹ ಘಟನೆ ಮತ್ತೆ ಮರುಕರಿಸದಂತೆ ಲೋಕಾಯುಕ್ತ ಕ್ರಮ ಕೈಗೊಳ್ಳುತ್ತೆ ಎಂದರು.

The post Bengaluru; ಅತ್ತಿಬೆಲೆ ಪಟಾಕಿ ದುರಂತ ಕೇಸ್, ಇದು ಅತ್ಯಂತ ದುರಾದೃಷ್ಟ ಸಂಗತಿ- ಬಿ.ಎಸ್.ಪಾಟೀಲ್ appeared first on Ain Live News.

LEAVE A REPLY

Please enter your comment!
Please enter your name here