ಬೆಂಗಳೂರು;- ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಸಚಿವ ಮುನಿರತ್ನ ಭೇಟಿ ಮಾಡಿದ್ದಾರೆ.
ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಇಂದು ಮದ್ಯಾಹ್ನ ಭೇಟಿ ನೀಡಿ ಚರ್ಚಿಸಿದರು. ಕಳೆದ 20 ನಿಮಿಷಗಳಿಂದ ಡಿಕೆ ಶಿವಕುಮಾರ್ ಜೊತೆ ಮುನಿರತ್ನ ಮಾತುಕತೆ ಮಾಡಿದ್ದು, ಅನುದಾನದ ಕುರಿತು ಉಭಯ ನಾಯಕರು ಚರ್ಚೆ ಮಾಡುತ್ತಿದ್ದಾರೆ.
ಇನ್ನೂ ಕ್ಷೇತ್ರಕ್ಕೆ ಕೊಟ್ಟಿರುವ ಅನುದಾನ ವಾಪಸ್ ಪಡೆದಿರುವ ಸರ್ಕಾರದ ನಡೆ ಖಂಡಿಸಿ ಇಂದು ಮುನಿರತ್ನ ಅವರು ವಿಧಾನಸೌಧದ ಮುಂಭಾಗ ಧರಣಿ ನಡೆಸಿದ್ದಾರೆ. ಧರಣಿಗೆ BSY ಸೇರಿ ಹಲವು ನಾಯಕರು ಸಾಥ್ ನೀಡಿದ್ದಾರೆ.
BSY ಸಲಹೆ ಪಡೆದ ಮುನಿರತ್ನ ಅವರು ಬಳಿಕ ಡಿಕೆಶಿ ಅವರನ್ನು ಮುನಿರತ್ನ ಭೇಟಿ ಮಾಡಿದ್ದಾರೆ.
The post Bengaluru; ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಶಾಸಕ ಮುನಿರತ್ನ appeared first on Ain Live News.