ಬೆಂಗಳೂರು;- ಅಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಇಂದು ರೈತರ ಹೊಲಗಳಿಗೆ ಪವರ್ ಕಟ್ ಆಗಿದೆ. ಮುಂದೆ ಮನೆಗಳಿಗೆ ಪವರ್ ಕಟ್ ಆಗುತ್ತದೆ. ಕರೆಂಟೇ ಇಲ್ಲ, ನಾವು ಪುಕ್ಕಟ್ಟೆ ಕರೆಂಟ್ ಕೊಡುತ್ತೇವೆ ಅಂತಾರೆ. ಕರಂಟ್ ಇಲ್ಲದಿದ್ದರೆ, ಪವರ್ ಎಲ್ಲಿಂದ ಕೊಡುತ್ತೀರಿ, ನೋ ಪವರ್ ನೋ ಬಿಲ್ ಚಾರ್ಜ್ ಎಂದು ವ್ಯಂಗ್ಯವಾಡಿದರು.
10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದರು. ಎಲ್ಲಿದೆಯಪ್ಪ ನಿಂದು ಅಕ್ಕಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬೊಮ್ಮಾಯಿ, ಅಕ್ಕಿ ಇಲ್ಲ ಅಂತಾ ಅಲ್ಲ, ಬೇರೆ ಎರಡ್ಮೂರು ರಾಜ್ಯಗಳಲ್ಲಿ ಅಕ್ಕಿ ಸಿಗುತ್ತದೆ. ಆದರೆ ವ್ಯವಹಾರ ಕುದುರಿಲ್ಲ. ವ್ಯವಾಹಾರ ಕುದುರಿದರೆ ಅಕ್ಕಿ ಕೊಡುತ್ತಾರೆ ಎಂದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಲೇವಡಿ ಮಾಡಿದ ಬೊಮ್ಮಾಯಿ, 2 ಸಾವಿರ ಹಾಕಿದ್ದಾರಾ? ನನಗೊಬ್ಬ ಬ್ಯಾಂಕ್ ಅಧಿಕಾರಿ ಸಿಕ್ಕಿದ್ದ, ಸಾಕಾಗಿದೆ ಸರ್ ಈ ಸರ್ಕಾರದಿಂದ. ಮಹಿಳೆಯರಿಗೆ ಮಸೆಜ್ ಹಾಕುತ್ತಾರೆ, ದುಡ್ಡು ಹಾಕಲ್ಲ. ಆ ಮಹಿಳೆಯರು ಬಂದು ಬ್ಯಾಂಕ್ ಎದುರು ಬಂದು ಕುಳಿತುಕೊಳ್ಳುತ್ತಾರೆ ಅಂತ ಹೇಳಿದ್ದಾಗಿ ತಿಳಿಸಿದರು.
The post Bommai; ನೋ ಪವರ್, ನೋ ಬಿಲ್ ಚಾರ್ಜ್ ಇದು ಕಾಂಗ್ರೆಸ್ ಸಿದ್ದಾಂತ – ಬೊಮ್ಮಾಯಿ ವ್ಯಂಗ್ಯ appeared first on Ain Live News.