ಬೆಂಗಳೂರು : ಡಿಕೆಶಿ ನೇತೃತ್ವದಲ್ಲಿ ಇಂದು ‘ಬ್ರ್ಯಾಂಡ್ ಬೆಂಗಳೂರು’ ಸಮ್ಮೇಳನ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದಿದ್ದು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು.
ಕುಮಾರಸ್ವಾಮಿ ಗೊಡ್ಡು ಬೆದರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ: ಡಿಕೆ ಸುರೇಶ್
ಬೆಂಗಳೂರಿನಲ್ಲಿ 1 ಕೋಟಿ 40 ಜನರು ವಾಸವಾಗಿದ್ದಾರೆ. ಹೊಸ ಮನೆಗಳು ನಿರ್ಮಾಣವಾಗುತ್ತಿರುವುದು ವಿದ್ಯುತ್ ಸಂಪರ್ಕದಿಂದ ಗೊತ್ತಾಗುತ್ತಿದೆ. ನೀರಿನ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಟ್ರಾಫಿಕ್ )ಸಮಸ್ಯೆ ಸಹ ದಟ್ಟವಾಗಿ ಕಾಡುತ್ತಿದೆ. ಹೀಗಾಗಿ ಎಂಟು ಜನರ ತಂಡ ರಚಿಸಲಾಗಿದೆ.
ಬೆಂಗಳೂರು ಯಾವ ನಿಟ್ಟಿನಲ್ಲಿ ಬದಲಾವಣೆ ಆಗಬೇಕು ಅಂತ ಈಗಾಗಲೇ 70 ಸಾವಿರ ಸಲಹೆಗಳು ಬಂದಿದೆ. ಎಂಟು ಜನರ ತಂಡ ಈ ಸಲಹೆಗಳನ್ನು ಪರಿಶೀಲಿಸಿ, ಸದ್ಯದರಲ್ಲೇ ಅವರು ವರದಿ ನೀಡಲಿದ್ದಾರೆ. “ಸಹಾಯ ಹಸ್ತ” ವೆಬ್ ಸೈಟ್ ಓಪನ್ ಮಾಡಲಿದ್ದೇವೆ. ನೀರು, ವಿದ್ಯುತ್, ಕಸ ಇತ್ಯಾದಿ ಬಗ್ಗೆ ಜನರು ದೂರು ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಎಂಟು ವಿಚಾರಗಳ ಕುರಿತು ಚರ್ಚೆ ನಡೆಯಿತು ಇಲ್ಲಿದೆ ಅದರ ವಿವಿರ!
1. ಸಂಚಾರಯುಕ್ತ ಬೆಂಗಳೂರು
2. ಹಸಿರು ಬೆಂಗಳೂರು
3. ಸ್ವಚ್ಛ ಬೆಂಗಳೂರು
4. ಜನಹಿತ ಬೆಂಗಳೂರು
5. ಆರೋಗ್ಯಕರ ಬೆಂಗಳೂರು
6. ಟೆಕ್ ಬೆಂಗಳೂರು
7. ಜಲಸುರಕ್ಷಾ ಬೆಂಗಳೂರು
8. ಶೈಕ್ಷಣಿಕ ಬೆಂಗಳೂರು
The post Brand Bengaluru: ‘ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ’ ನಾಗರಿಕರ ಧ್ವನಿಯೇ ಸರ್ಕಾರದ ಧ್ವನಿ: ಡಿ.ಕೆ.ಶಿವಕುಮಾರ್ appeared first on Ain Live News.