ಹೊಸಕೋಟೆ;- ದುಷ್ಕರ್ಮಿಗಳು ರಾಜಕೀಯ ದ್ವೇಷಕ್ಕೆ ತೋಟದಲ್ಲಿನ ಪೈಪ್ ಹಾಗೂ ಟಾರ್ಪಲ್ ಕತ್ತರಿಸಿದ್ಜಾರೆ. ರಾಜಕೀಯ ದ್ವೇಷ ರಾಜಕೀಯವಾಗಿ ಎದುರಿಸಬೇಕು ಈ ರೀತಿ ಬೆಳೆಗಳ ಮೇಲೆ ತೋರಿಸಬಾರದು.
5 ಭಾರಿ ತೋಟದಲ್ಲಿನ ಪೈಪ್ ಸೇರಿದಂತೆ ಇತರೆ ವಸ್ತುಗಳ ನಾಶ ಪಡಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ರೈತ ಮನು ಹಾಗೂ ಅವರ ತಂದೆ ರೈತರಾಗಿದ್ದು ಬೆಳೆಗಳನ್ನು ಬೆಳೆದು ಅದರಿಂದಲೇ ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಮುಗಿದ ನಂತರದಿಂದ ಬಿಜೆಪಿ ಪಕ್ಷದ ಪರ ಚುನಾವಣೆಯಲ್ಲಿ ಹೊಡಾಡಿದ್ದೇನೆ ಎಂದು ಯಾರೋ ದುಷ್ಕರ್ಮಿಗಳು ನಮ್ಮ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ.
ತಡ ರಾತ್ರಿ ಸುಮಾರು 60 ಸಾವಿರದಷ್ಟು ಬೆಲೆ ಬಾಳುವ ಕೃಷಿ ಹೊಂಡದ ಟಾರ್ಪಲ್ ಕೊಯ್ದು ಕೃತ್ಯವೆಸಗಿದ್ದಾರೆ. ಇದೆ ರೀತಿ ಮತ್ತೊಂದು ತೋಟದಲ್ಲಿ ಬೆಳೆಗಳಿಗೆ ಹಾಕಿದ್ದ ಪೈಪ್ ಎಲ್ಲಾ ಕತ್ತರಿಸಿ ನಾಶ ಮಾಡಿದ್ದಾರೆ.
ಈಗಾಗಲೇ 5 ಭಾರಿ ತೋಟದಲ್ಲಿನ ಡ್ರಿಪ್ ಪೈಪ್ ಸೇರಿದಂತೆ ತೋಟದಲ್ಲಿ ಹಾಕಿದ್ದ ಬೆಲೆಯನ್ನು ನಾಶ ಮಾಡಿದ್ದಾರೆ. ರಾಜಕೀಯ ದ್ವೇಷವಿದ್ದರೆ ಚುನಾವಣೆ ಸಮಯದಲ್ಲಿ ತೋರಿಸಬೇಕು ಈ ರೀತಿ ಬೆಳೆಗಳ ಮೇಲೆ ತೋರಿಸುವುದು ಸರಿಯಲ್ಲ. ಸಾಲ ಸೋಲ ಮಾಡಿ ಹಾಕಿದ ಬಂಡವಾಳ ಈ ರೀತಿ ನಾಶ ಮಾಡಿದರೆ ಯಾವ ರೀತಿ ನ್ಯಾಯ ಶಾಸಕರು ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
The post Breaking; ರಾಜಕೀಯ ದ್ವೇಷಕ್ಕೆ ತೋಟದಲ್ಲಿನ ಪೈಪ್ ಹಾಗೂ ಟಾರ್ಪಲ್ ಕತ್ತರಿಸಿದ ದುಷ್ಕರ್ಮಿಗಳು appeared first on Ain Live News.