ಬೆಂಗಳೂರು: ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಹಿಂಭಾಗದ ರಸ್ತೆಯಲ್ಲಿ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಹೈಗ್ರೌಂಡ್ಸ್ ಪೊಲೀಸರ ತನಿಖೆಯಿಂದ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣದ ಬಗ್ಗೆ ಸುಳ್ಳು ದೂರು ನೀಡಿದ್ದ ಖಾಸಗಿ ಕಂಪನಿಯ ಉದ್ಯೋಗಿ ರವಿರೆಡ್ಡಿ ಎಂಬುವವರು ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿದ್ದರು. ಆದ್ರೆ ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದಿರಲಿಲ್ಲಹಾಗಾಗಿ ಅನುಮತಿ ಇಲ್ಲದೆಯೇ ಆ.21 ಕ್ಕೆ ಬಸ್ ಸ್ಟ್ಯಾಂಡ್ ಕೆಲಸ ಶುರು ಮಾಡಿಸಿದ್ದ ರವಿರೆಡ್ಡಿ
ಆದ್ರೆ ಶುರು ಮಾಡಿದ ಮೊದಲ ದಿನವೇ ಅರ್ಧಕ್ಕೆ ನಿಲ್ಲಿಸಿ, ಮೆಟಿರೀಯಲ್ ಅಲ್ಲೇ ಬಿಟ್ಟಿದ್ದ ಇದ್ರಿಂದ ಪಾದಚಾರಿಗಳಿಗೆ ಓಡಾಡಕ್ಕೆ ತೊಂದರೆ ಉಂಟಾಗಿತ್ತು ಈ ಬಗ್ಗೆ ಶಿವಾಜಿನಗರದ ಎಇಇಗೆ ಸಾರ್ವಜನಿಕರು ದೂರು ನೀಡಿದ್ದರು
ಈ ವೇಳೆ ಬಂದು ಸ್ಥಳ ಪರಿಶೀಲನೆ ಮಾಡಿ ವಿಡಿಯೋ ತಗೊಂಡಿದ್ದ ಶಿವಾಜಿನಗರ ಎಇಇ ಪರಿಶೀಲನೆ ವೇಳೆ ಅಲ್ಲಿ ಬಸ್ ಸ್ಟ್ಯಾಂಡ್ ಮಾಡಲು ಅನುಮತಿಯೇ ಇರಲಿಲ್ಲ ಅನ್ನೋದು ಬಯಲು ಹೀಗಾಗಿ ಫುತ್ ಬಾತ್ ಮೇಲೆ ಬಿದ್ದಿದ್ದ ಮೆಟಿರೀಯಲ್ ಸೀಜ್ ಮಾಡಿದ್ದ ಎಇಇನಂತರ ಅದನ್ನ ಗೋಡೌನ್ ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು
ಆ. 28 ಕ್ಕೆ ಮೆಟಿರೀಯಲ್ ಕಾಣೆಯಾಗಿರೋದನ್ನು ಗಮನಿಸಿದ್ದ ರವಿರೆಡ್ಡಿ ಸೆ.30 ರಂದು ಮತ್ತೆ ಹೈಗ್ರೌಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದನು ಆ ನಂತರ ದೂರು ಪಡೆದು ತನಿಖೆ ಮಾಡಿದಾಗ ಅಸಲಿ ಸತ್ಯಾಂಶ ಬಯಲಿಗೆ ಬಂದಿದೆ.
ಸದ್ಯ ರವಿರೆಡ್ಡಿ ವಿರುದ್ದವೇ ದೂರು ನೀಡಲು ಮುಂದಾಗಿರುವ ಬಿಬಿಎಂಪಿ ಆದರೀಗ ಇದು ಸುಳ್ಳು ಕೇಸ್ ಎಂಬುದು ಪತ್ತೆಯಾಗಿದೆ ಹಾಗಾಗಿ ಅಪರಾಧಿಯನ್ನು ಹಿಡಿದು ಹೆಚ್ಚಿನ ವಿಚಾರಣೆ ನಡೆಸಬೇಕಿದೆ.
ಬಸ್ ಶೆಲ್ಟರ್ ಕಳ್ಳತನವಾಗಿರಲಿಲ್ಲಇದನ್ನು ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ತೆರವುಗೊಳಿಸಿದ್ರು ಸೈನ್ ಪೋಸ್ಟ್ ಕಂಪನಿಯವರು ಮಿಸ್ ಲೀಡ್ ದೂರು ನೀಡಿದ್ದಾರೆ ದೂರಿನನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ,
The post Bus Shelter Theft Case: ಬೆಂಗಳೂರಲ್ಲಿ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಏನಂತ ಕೇಳಿದ್ರೆ ಅಚ್ಚರಿಯಾಗುತ್ತೆ! appeared first on Ain Live News.