ಬೆಂಗಳೂರು: ಮತ್ತೆ ತಮಿಳುನಾಡು ಸರ್ಕಾರಕ್ಕೆ ನೀರು ಬಿಡುವುದಕ್ಕೆ ಹೇಳಿರುವುದರಿಂದ ಕಾವೇರಿಗಾಗಿ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಕಾವೇರಿ ನಿರ್ವಹಣಾ ಮಂಡಿಳಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ತಮಿಳನಾಡಿನ ಪರವಾಗಿ ತೀರ್ಪು ಕೊಟ್ಟಿದೆ ನಮ್ಮಲ್ಲಿ ನೀರಿದ್ರೆ ನಾವು ತಮಿಳುನಾಡಿಗೆ ಕೊಡಬಾರದು ಎಂದೇನಿರಲಿಲ್ಲ ಸ್ಟಾಲಿನ್ ಇಂಡಿಯಾ ಒಕ್ಕೂಟಕ್ಕೆ ಬೆದರಿಕೆ ಹಾಕಿದ್ದಾರೆ ಇಂಡಿಯಾ ಸಂಘಟನೆಗೂ ಕರ್ನಾಟಕಕ್ಕೂ ಸಂಭಂದವಿಲ್ಲ ಸ್ಟಾಲಿನ ವಾದ ಸರಿಯಿಲ್ಲ ನಮ್ಮ ರಾಜ್ಯ ಸರ್ಕಾರ ಶಾಸನ ಸಭೆ ಕರೆದು ತಿರ್ಮಾನ ತೆಗೆದು ಕೊಳ್ಳಬೇಕು ನೀರಿದ್ದು ನೀರನ್ನ ಕೊಡ್ತಿಲ್ಲ ಎನ್ನೊ ಹಾಗೆ ಬಿಂಬಿಸಲಾಗಿದೆ ಎಂದರು.
ಹಾಗೆ ನಾಳೆ ಕಾವೇರಿ ಪ್ರಾಧಿಕಾರದ ಸಭೆ ಇದೆ ಸಭೆಯಲ್ಲಿ ಏನಾಗುತ್ತೆ ನೋಡೊಣ ಪ್ರಾಧಿಕಾರದ ವಿರುದ್ದ ಸೋಮವಾರ ಭಾರಿ ಪ್ರಮಾಣದ ಹೋರಾಟ ಮಾಡ್ತೇವೆಕರಾಳ ದಿನವನ್ನ ಸೋಮವಾರ ಆಚರಿಸುತ್ತೇವೆ ಎಂದು ಕಿಡಿಕಾರಿದರು.
ಬೆಂಗಳೂರಿಗೆ ಕುಡಿಯುವ ನೀರಿಲ್ಲ ಕಾವೇರಿ ನೀರು ತಮಿಳುನಾಡಿಗೆ ಬಿಡೊದಕ್ಕಾಗಲ್ಲ ಅಕ್ಟೋಬರ್ 16ಕ್ಕೆ ಕರಾಳ ದಿನ ಆಚರಿಸುತ್ತೇವೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ ಎಂದು ಹೇಳಿದರು.
The post Cauvery Protest: ಕಾವೇರಿ ವಿವಾದ: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ appeared first on Ain Live News.