Home Uncategorized Chakravarthy Sulibele: ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖ: ಚಕ್ರವರ್ತಿ ಸೂಲಿಬೆಲೆ

Chakravarthy Sulibele: ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖ: ಚಕ್ರವರ್ತಿ ಸೂಲಿಬೆಲೆ

47
0

ಮಂಗಳೂರು”ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖ. ಶೌರ್ಯವಿಲ್ಲದೆ ಹಿಂದೂ ಇಲ್ಲ. ಧರ್ಮಕ್ಕಾಗಿ ಶೌರ್ಯ ತೋರಿಸಿ ಎಂದೂ ಹೇಳಿಕೊಟ್ಟದ್ದೂ ಭಾರತ. ಅದನ್ನು ಮರೆಯಬಾರದು. ಖಡ್ಗ ಎತ್ತಬೇಕಾದ ಅನಿವಾರ್ಯತೆ ಎದುರಾದರೆ ಅಂಜುವವರು ನಾವಲ್ಲ ಎಂಬ ಸಂದೇಶ ನೀಡಬೇಕಾದೆ” ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ ಬಜರಂಗ ದಳ ಮಂಗಳೂರು ಜಿಲ್ಲೆಯ ವತಿಯಿಂದ ನಡೆದ ಜಾಗರಣ ರಥಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ಪಾಲಿಗೆ ಮುಂದಿನ ಆರು ತಿಂಗಳು ನಿರ್ಣಾಯಕ. ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ನಾವು ಯಾರ ಜತೆಯೂ ಖಡ್ಗ ಎತ್ತಿಕೊಂಡು ಹೋಗಬೇಕಾಗಿಲ್ಲ. ಆದರೆ, ಖಡ್ಗ ಎತ್ತಬೇಕಾದ ಅನಿವಾರ್ಯತೆ ಎದುರಾದರೆ ಅಂಜುವ ಜನ ನಾವಲ್ಲ ಎಂಬ ಸಮರ್ಥ ಸಂದೇಶ ನೀಡಬೇಕಾಗಿದೆ. ಆಗ ಶೌರ್ಯ ಜಾಗರಣ ಕಾರ್ಯಕ್ರಮ ಯಶಸ್ವಿ ಎಂದು ಭಾವಿಸುತ್ತೇನೆ ಎಂದರು.

”ದೇಶದಲ್ಲಿ ರಾಮಮಂದಿರ ನಿರ್ಮಾಣ ಮೂಲಕ ಅತ್ಯಂತ ಗಂಭೀರ ಕೆಲಸವನ್ನು ವಿಶ್ವ ಹಿಂದೂ ಪರಿಷತ್‌ ಆರಂಭಿಸಿದರೆ, ತರುಣರ ಬೆಂಬಲಕ್ಕಾಗಿ ಬಜರಂಗದಳ ಸ್ಥಾಪನೆಯಾಗಿದೆ. ನಮ್ಮ ಶ್ರದ್ಧಾ ಕೇಂದ್ರಗಳು, ತಾಯಂದಿರ ರಕ್ಷಣೆ ಜತೆಗೆ ಇಂಡಿಯಾವನ್ನು ಭಾರತನ್ನಾಗಿಸುವ ಅವರ ಸಂಕಲ್ಪಕ್ಕೆ ಬೆಂಬಲ ಕೊಡುವುದು ನಮ್ಮ ಹೊಣೆ” ಎಂದು ಅವರು ಹೇಳಿದರು.

The post Chakravarthy Sulibele: ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖ: ಚಕ್ರವರ್ತಿ ಸೂಲಿಬೆಲೆ appeared first on Ain Live News.

LEAVE A REPLY

Please enter your comment!
Please enter your name here