ಬೆಂಗಳೂರು:
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ ವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ.
2005ರಿಂದಲೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ, ಈ ಬಾರಿಯ ಚುನಾವಣೆ ಕಗ್ಗಂಟಾಗಿ ಪರಿಣಮಿಸಿರುವ ಸಾಧ್ಯತೆಗಳಿವೆ.
ಬೆಂಗಳೂರಿನ ಹೃದಯಭಾಗದಲ್ಲಿ ಚಾಮರಾಜಪೇಟೆ ಕ್ಷೇತ್ರವಿದ್ದು, ಇಲ್ಲಿರುವ ಹಲವಾರು ಸಮಸ್ಯೆಗಳು ಗಮನ ಸೆಳೆಯುತ್ತಿದೆ. ಈಗ್ದಾ ಮೈದಾನದ ಹಕ್ಕುಗಳಿಗೆ ಸಂಬಂಧಿಸಿದ ಕೋಮು ಉದ್ವಿಗ್ನತೆ ಮತ್ತು ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಕ್ಷೇತ್ರವು ಕೆಲ ದಿನಗಳ ಹಿಂದೆ ಸುದ್ದಿಯಲ್ಲಿತ್ತು. ಇದಲ್ಲದೆ, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ. ಈ ಎಲ್ಲಾ ಸಮಸ್ಯೆಗಳು ಈ ಬಾರಿಯ ಚುನಾವಣೆಯಲ್ಲಿ ಜಮೀರ್ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ದಿನಗೂಲಿ ಕಾರ್ಮಿಕ ಹಾಗೂ ಅಂಜನಪ್ಪ ಗಾರ್ಡನ್ ನಿವಾಸಿ ಪುರುಷೋತ್ತಮನ್ ಎಂಬುವವರು ಮಾತನಾಡಿ, ”ಕ್ಷೇತ್ರದ ಅರ್ಧ ಭಾಗವು ಕೊಳಗೇರಿ ಪ್ರದೇಶಗಳಿಂದ ಕೂಡಿದೆ. ಅಂಜನಪ್ಪ ಗಾರ್ಡನ್, ಸಿದ್ದಾರ್ಥನಗರ, ಛಲವಾದಿಪಾಳ್ಯ, ಗೋರಿಪಾಳ್ಯ, ಜಗಜೀವನರಾಮ್ ನಗರ ಮತ್ತು ಇತರೆ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತವೆ. ಕಸದ ತೊಟ್ಟಿಗಳು ಕೊಳೆತು ನಾರುತ್ತವೆ. ನಮಗೆ ಕೊಳಚೆ ನೀರು ಮಿಶ್ರಿತ ಪೈಪ್ಲೈನ್ನಗಳನ್ನು ನೀಡಲಾಗಿದೆ. ಈ ಬಗ್ಗೆ ಪದೇ ಪದೇ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
The door to door campaigns are helping to build a good connect with the people of my constituency. The trust they show when I listen to them, gives me a stronger sense of purpose to serve. 🙏🏼
— Bhaskar Rao (@Nimmabhaskar22) April 24, 2023
#KarnatakaElection2023 pic.twitter.com/EbidlUwt1z
ನಿರುದ್ಯೋಗಿ ಯುವಕರು ಕುಡಿತದ ಅಮಲಿನಲ್ಲಿ ರಾತ್ರಿ ವೇಳೆ ರಸ್ತೆಗಿಳಿದು ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ. ಪೊಲೀಸರು ಕ್ಷೇತ್ರದಲ್ಲಿ ಹೆಚ್ಚಿನ ಗಸ್ತು ತಿರುಗಬೇಕು ಎಂದು ಹಳೇ ಗುಡ್ಡದಹಳ್ಳಿ ನಿವಾಸಿ ಶರತ್ಕುಮಾರ್ ಕೆ.ಪಿ ಎಂಬುವವರು ಹೇಳಿದ್ದಾರೆ.
ಕ್ಷೇತ್ರದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು. ಜಮೀರ್ ಅವರು ಆರೋಗ್ಯ, ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಾರೆ. ಆದರೆ ಕ್ಷೇತ್ರದಲ್ಲಿ ಸಾವಿರಾರು ಬಡವರಿದ್ದು, ಅವರೆಲ್ಲ ಹಣಕ್ಕಾಗಿ ಅವರ ಮನೆ ಮುಂದೆ ಹೋಗಿ ನಿಲ್ಲಲು ಸಾಧ್ಯವಿಲ್ಲ. “ಶಾಸಕರಾಗಿ ಅವರ ಗಮನವು ತಾತ್ಕಾಲಿಕ ಪರಿಹಾರವಾದ ಹಣವನ್ನು ನೀಡುವ ಬದಲು ಬಡತನವನ್ನು ತೊಡೆದುಹಾಕುವತ್ತ ಇರಬೇಕು. ಅಲ್ಲದೆ, ಆರ್ಥಿಕ ನೆರವು ಪಡೆದವರು ಎಂದಿಗೂ ಶಾಸಕರ ವಿರುದ್ಧ ಮಾತನಾಡುವುದಿಲ್ಲ ಅಥವಾ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂದು ತಿಳಿಸಿದ್ದಾರೆ.
ಕೆ.ಆರ್.ಮಾರುಕಟ್ಟೆ ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಪ್ರತಿನಿತ್ಯ ನೂರಾರು ಜನರು ಭೇಟಿ ನೀಡಿದರೂ ಮಾರುಕಟ್ಟೆಯನ್ನು ಕಳಪೆ ನಿರ್ವಹಣೆ ಮಾಡಲಾಗುತ್ತಿದೆ. ಮಾರುಕಟ್ಟೆ ದೊಡ್ಡ ಕಸದ ರಾಶಿಗಳಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿದೆ.
ಈ ನಡುವೆ ಈ ಬಾರಿಯ ಚುನಾವಣೆಯಲ್ಲಿ ಜಮೀರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಭಾಸ್ಕರ್ ರಾವ್ ಅವರು ಕಣಕ್ಕಿಳಿದಿದ್ದು, ಗೆಲುವು ಸಾಧಿಸಿದ್ದೇ ಆದರೆ, ಚಾಮರಾಜಪೇಟೆ ಬದಲಾವಣೆಗೆ ಸಿದ್ಧ ಎಂದು ಹೇಳಿದ್ದಾರೆ. ಇದು ಹಲವರ ಗಮನ ಸೆಳೆದಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ್ದ ಭಾಸ್ಕರ್ ರಾವ್ ಅವರು, ನಗರದ ಹೃದಯಭಾಗದಲ್ಲಿರುವ ಕ್ಷೇತ್ರವು ಬಡತನ, ತುಂಬಿ ಹರಿಯುವ ಒಳಚರಂಡಿ ಮತ್ತು ಅಪರಾಧಗಳಿಂದ ಕೂಡಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ದೂರದ ಹಳ್ಳಿಗಳಲ್ಲಿ ಚಾಮರಾಜಪೇಟೆಗಿಂತ ಉತ್ತಮ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಇವೆ. ಅಪರಾಧವು ಬಡತನದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಇದನ್ನು ನಿರ್ಮೂಲನೆ ಮಾಡಬೇಕಿದೆ. ನಾನು ಕ್ಷೇತ್ರದ ಬಗ್ಗೆ ದೂರದೃಷ್ಟಿ ಹೊಂದಿದ್ದು, ಗೆಲುವು ಸಾಧಿಸಿದ್ದೇ ಆದರೆ, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸುವುದರ ಹೊರತಾಗಿ ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಶುದ್ಧ ಕುಡಿಯುವ ನೀರು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಜನರು ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಚಾಲ್ತಿಯಲ್ಲಿರುವ ದುರಾಡಳಿತವನ್ನು ಕೊನೆಗೊಳಿಸಬೇಕೆಂದು ತಿಳಿಸಿದ್ದರು.