ರಾಮನಗರ: “ಎಸ್.ಟಿ.ಸೋಮಶೇಖರ್ ಅವರು ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದಮೇಲೆ ಬಿಡಿಎ ಅಧ್ಯಕ್ಷ ಆದರು. ಮಂತ್ರಿ ಆಗಿ ಪ್ರಬಲ ಖಾತೆ ಪಡೆದರು.ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರ ಇಲ್ಲ ಅಂತ ಹೀಗೆ ಮಾತನಾಡುತ್ತಾರೆ. ಅವರು ಪಕ್ಷ ತೊರೆಯುವುದಿಲ್ಲರೆ ಸ್ವಾಗತಿಸುತ್ತೇವೆ” ಮಾಜಿ ಸಚಿವ ಸಿಪಿ ಯೋಗೇಶ್ವರ್ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನ ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡ್ತಿದ್ದರು. ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜಿನಾಮೆ ಕೊಟ್ರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
CM ಸಿದ್ದುವಿನ ಎರಡನೇ ಮುಖ ದಲಿತರನ್ನು ಅವನತಿಗೆ ದೂಡುವುದು – ಬಿ ಶ್ರೀರಾಮುಲು
ಒಂದುವೇಳೆ ಅವರು ಹೊರಹೋಗುವ ತೀರ್ಮಾನ ಮಾಡಿದ್ರೆ ನಮ್ಮ ವಿರೋಧ ಇಲ್ಲ, ಸ್ವಾಗತಿಸುತ್ತೇವೆ. ಪದೇ ಪದೇ ಪಕ್ಷವನ್ನು ಟೀಕೆ ಮಾಡುವುದು ನಮಗೂ ನೋವು ತರುತ್ತೆ. ಅಧಿಕಾರ ಇದ್ದಾಗ ಅನುಭವಿಸಿ ಇಂದು ಪಕ್ಷದ ವಿರುದ್ಧ ಮಾತನಾಡೋದು ಶೋಭೆಯಲ್ಲ ಎಂದು ಅಭಿಪ್ರಾಯಪಟ್ಟರು.
The post CP Yogeshwar: ಪದೇ ಪದೇ ಪಕ್ಷವನ್ನು ಟೀಕೆ ಮಾಡುವುದು ನಮಗೂ ನೋವು ತರುತ್ತೆ: ಸಿಪಿ ಯೋಗೇಶ್ವರ್ appeared first on Ain Live News.