ಬೆಂಗಳೂರು: ಕ್ರೈಂ ರಿಪೋರ್ಟರ್ ರಾಗಿ ಕೆಲಸ ಮಾಡುತ್ತಿದ್ ಗಣೇಶ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕಸ್ತೂರಿ ಟಿವಿಯಿಂದ ಕೆಲಸ ಶುರು ಮಾಡಿದ ಗಣೇಶ್ ಅವರು, ಪ್ರಜಾ ಟಿವಿ, ನ್ಯೂಸ್ 18 ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕ್ರೈಂ ವರದಿಗಾರರಾಗಿ , ಕ್ರೈಂ ಬ್ಯೂರೋ ಮುಖ್ಯಸ್ಥರಾಗಿ, ಇನ್ಪುಟ್, ಔಟ್ ಪುಟ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಸದ್ಯ ಟಿವಿ5ನಲ್ಲಿ ಅವರು ಇನ್ಪುಟ್ ಮುಖ್ಯಸ್ಥರಾಗಿದ್ದರು.