ಕಲಬುರಗಿ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು (ಡಿಸೆಂಬರ್ 14) ರೈತರು ಪ್ರತಿಭಟಿಸಿದ್ರು. ಪ್ರತಿಭಟನೆಗೆ ತೊಗರಿ ಗಿಡಗಳನ್ನು ತಂದಿದ್ದ ರೈತರು ಬಳಿಕ ಅಲ್ಲಿಯೇ ಬಿಟ್ಟು ಹೋಗಿದ್ರು. ಅಷ್ಟೇ ಅಲ್ಲ.. ಆವರಣ ಸುತ್ತಮುತ್ತ ಕಸ ಕಡ್ಡಿಯಿಂದ ತುಂಬಿ ತುಳುಕುತ್ತಿತ್ತು.
ಈ ವೇಳೆ ಕಲಬುರಗಿ ನಗರದ ಅಶೋಕ ನಗರ ಠಾಣೆಯ ಸಿಪಿಐ ಪಂಡಿತ್ ಸಾಗರ್ ಆವರಣವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಕಲಬುರಗಿಯ ಪೊಲೀಸ್ ಇನ್ಸ್ಪೆಕ್ಟರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.