ಬೆಂಗಳೂರು, ಮಾರ್ಚ್ 19 (ಕರ್ನಾಟಕ ವಾರ್ತೆ): ಪಂಚ ಗ್ಯಾರಂಟಿಗಳು ಉಚಿತ ಕೊಡುಗೆಗಳಲ್ಲ. ಗ್ಯಾರಂಟಿ ಯೋಜನೆಗಳ ಹಿಂದೆ ಬಡತನದ ನೋವಿದೆ, ಬಡತನದ ಹಿಂಸೆ ಇದೆ, ಮಹಿಳೆಯರಲ್ಲಿ ಮಡುಗಟ್ಟಿದ ನೋವುಗಳಿಗೆ, ಅಸಮಾನ ಭಾರತದ ಪರಿಕಲ್ಪನೆ ಇದೆ. ಪಂಚ ಗ್ಯಾರಂಟಿಗಳು ಜನರ ಏಳಿಗೆಗೆ ಅನುಕೂಲವಾಗಿದೆ ಎಂದರು.
ಇಂದು ವಿಧಾನಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಸ್ತಿನ ಕ್ರಮದಲ್ಲಿ 16ನೇ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಅನುದಾನ ಮೀಸಲಿಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯು ಮಹಿಳೆ ಯಾರ ಮೇಲೆ ಅವಲಂಬಿತವಾಗದೇ ಬದುಕಲು ಅನುಕೂಲಕವಾಗಿದೆ. ಕೇವಲ ಗೃಹಲಕ್ಷ್ಮಿ ಅಲ್ಲದೇ ಪಂಚ ಗ್ಯಾರಂಟಿಗಳು ಜನರ ಹಿತ ಕಾಪಾಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಬಂದರೂ ಈ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಏರ್ ಪೋರ್ಟ್ ನಿರ್ಮಾಣ, ಸಿಗ್ನೇಚರ್ ಪಾರ್ಕ್, ಟನಲ್ಗಳ ನಿರ್ಮಾಣ ಕಾರ್ಯಗಳು ಆಗುತ್ತಿವೆ. ಹೈನುಗಾರಿಕೆ, ಕಾನೂನು ಸುವ್ಯವಸ್ಥೆ, ಕೃಷಿಗೆ ಸಂಬಂಧಪಟ್ಟಂತೆ ಆದ್ಯತೆ ನೀಡಬೇಕೆಂದು ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ಹೇಳಿದರು.