Home ಬೆಂಗಳೂರು ನಗರ ನಾಗಪುರ ವಾರ್ಡ್ ನಲ್ಲಿ ಉಚಿತವಾಗಿ 1000 ಪರಿಸರ ಸ್ನೇಹಿ ಗಣೇಶಮೂರ್ತಿ ವಿತರಣೆ

ನಾಗಪುರ ವಾರ್ಡ್ ನಲ್ಲಿ ಉಚಿತವಾಗಿ 1000 ಪರಿಸರ ಸ್ನೇಹಿ ಗಣೇಶಮೂರ್ತಿ ವಿತರಣೆ

70
0
Free distribution of 1000 eco-friendly Ganesha idols in Bengaluru's Nagpur ward

ಬೆಂಗಳೂರು:

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನಲ್ಲಿ ಮಾಜಿ ಉಪಮಹಾಪೌರರಾದ ಎಸ್.ಹರೀಶ್ ರವರು ಸಾರ್ವಜನಿಕರಿಗೆ ಉಚಿತವಾಗಿ 1000 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಿದರು

ಗಣೇಶ ಹಬ್ಬದ ಪ್ರಯುಕ್ತ ನಾಗಪುರ ವಾರ್ಡ್ ನಲ್ಲಿ ಪರಿಸರ ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಲು ಸಾರ್ವಜನಿಕರಿಗೆ 1ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ.

Free distribution of 1000 eco-friendly Ganesha idols in Bengaluru's Nagpur ward

ರಾಸಯನಿಕ ಬಣ್ಣದ ಗಣೇಶಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ, ನೀರು ಕಲುಷಿತವಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುತ್ತದೆ, ಯಾವುದೇ ಅಪಾಯವಿಲ್ಲ ಎಂದು ಹರೀಶ್ ಹೇಳಿದರು.

ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್ ನೀರಿನ ಟ್ಯಾಂಕರ್ ನಲ್ಲಿ ಗಣೇಶ ವಿಸರ್ಜನೆ ಮಾಡುವ ಕಾರ್ಯಕ್ರಮ 2010 ರಲ್ಲಿ ನನ್ನ ನೇತೃತ್ವದಲ್ಲಿ ಯಶ್ವಸಿಯಾಗಿ ಜರುಗಿತು. ಇಂದು ಮಹಾನಗರ ಪಾಲಿಕೆ ಮೊಬೈಲ್ ವಾಟರ್ ಟ್ಯಾಂಕರ್ ಗಳನ್ನು ವಾರ್ಡ್ ಗಳಲ್ಲಿ ಸ್ಥಾಪಿಸಿ ಗಣೇಶ ವಿಸರ್ಜನೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರು ಸ್ವಚ್ಚ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು,ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಬೇಕು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here